ಶೃಂಗೇರಿ: ಇಲ್ಲಿನ ತುಂಗಾನದಿಯಲ್ಲಿ ಭಾನುವಾರ ಪ್ರವಾಸಿಯೊಬ್ಬರು ಕಾಲು ಜಾರಿ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಮೃತ ವ್ಯಕ್ತಿಯನ್ನು ಅಭಿಜಿತ್ (25) ಎಂದು ಗುರುತಿಸಲಾಗಿದ್ದು ಇವರು ಮೂಲತಃ ಬೆಂಗಳೂರಿನ ಯಲಹಂಕದವರು.
ಇಲ್ಲಿಗೆ ಶನಿವಾರ ಆಗಮಿಸಿ ತಂಗಿದ್ದ ಅವರು ಭಾನುವಾರ ಸ್ನಾನಕ್ಕೆಂದು ಬೆಳಿಗ್ಗೆ ನದಿಗೆ ಇಳಿದಾಗ ದುರ್ಘಟನೆ ಸಂಭವಿಸಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.