ನವದೆಹಲಿ (ಐಎಎನ್ಎಸ್): ದೇಶದ ಉತ್ತರ ಮತ್ತು ಪೂರ್ವ ರಾಜ್ಯಗಳ ನಡುವೆ ಸರಕು ಸಾಗಾಣಿಕೆ ಸಂಚಾರ ಮಾರ್ಗ ಅಭಿವೃದ್ಧಿ ಪಡಿಸಲು ವಿಶ್ವಬ್ಯಾಂಕ್ 975 ದಶಲಕ್ಷ ಡಾಲರ್ ಸಾಲದ ನೆರವು ನೀಡಿದೆ.
ಈ ಮಾರ್ಗದ ಮಧ್ಯೆ ಕಚ್ಚಾ ವಸ್ತು, ಸಿದ್ಧ ಸರಕುಗಳ ರವಾನೆಗೆ ಅನುಕೂಲ ಕಲ್ಪಿಸಲು, ಮುಖ್ಯವಾಗಿ ರೈಲು ಸಂಚಾರ ಮಾರ್ಗ ಅಭಿವೃದ್ಧಿ ಪಡಿಸುವಂತೆ ಭಾರತೀಯ ಸಂಚಾರ ಮಾರ್ಗ ಅಭಿವೃದ್ಧಿ ನಿಗಮಕ್ಕೆ ಸೂಚಿಸಲಾಗಿದೆ. ಈ ನಾಲ್ಕು ರೈಲು ಮಾರ್ಗಗಳು ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತ ನಗರಗಳನ್ನು ಸಂಪರ್ಕಿಸಲಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.