ಬ್ಯಾಂಕಾಂಕ್(ಪಿಟಿಐ): ಕಕಳೆದ ಹಲವು ದಿನಗಳಿಂದ ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಮಣಿದಿರುವ ಥಾಯ್ಲೆಂಡ್ ಪ್ರಧಾನಿ ಯಿಂಗ್ಲಕ್ ಶಿನವತ್ರಾ, ಸೋಮವಾರ ನಿರೀಕ್ಷೆಯಂತೆ ಸಂಸತ್ತನ್ನು ವಿಸರ್ಜಿಸಲು ನಿರ್ಧರಿಸಿದ್ದಾರೆ. ಅದಾಗ್ಯೂ ರಾಷ್ಟ್ರವನ್ನು ಮುನ್ನಡೆಸಲು ‘ಜನತಾ ಸಮಿತಿ’ಯನ್ನು ನೇಮಿಸುವಂತೆ ಒತ್ತಾಯಿಸಿ ಸಾವಿರಾರು ಪ್ರತಿಭಟನಾಕಾರರು ಬೀದಿಗಿಳಿದಿದ್ದಾರೆ.