ಮುಂಬೈ (ಐಎಎನ್ಎಸ್): ಬಾಲಿವುಡ್ ನಟ ಅಮೀರ್ ಖಾನ್ ನಿರೂಪಣೆಯ ಕಿರುತೆರೆಯ ಕಾರ್ಯಕ್ರಮ `ಸತ್ಯಮೇವ ಜಯತೆ~ಯ ಪ್ರಸಾರಕ್ಕೆ ಕರ್ನಾಟಕ ಸರ್ಕಾರ ಅನುಮತಿ ನೀಡಬೇಕೆಂದು ಶಿವಸೇನಾ ಮುಖ್ಯಸ್ಥ ಬಾಳ ಠಾಕ್ರೆ ಮಂಗಳವಾರ ಆಗ್ರಹಿಸಿದರು.
ಶಿವಸೇನಾ ಮುಖವಾಣಿ ಸಾಮ್ನಾ ಪತ್ರಿಕೆಯಲ್ಲಿ ಈ ಕುರಿತಂತೆ ಸಂಪಾದಕೀಯ ಬರೆದಿರುವ ಠಾಕ್ರೆ ~ಕಳೆದ ಭಾನುವಾರ ಪ್ರಸಾರವಾದ `ಸತ್ಯಮೇವ ಜಯತೆ~ ಕಾರ್ಯಕ್ರಮದ ಮೊದಲ ಕಂತು ದೇಶದಾದ್ಯಂತ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ ಸಂಕುಚಿತ ಮನೋವೃತ್ತಿಯ ಕನ್ನಡ ಚಿತ್ರ ನಿರ್ಮಾಪಕರು ತೋರಿಸಿದ ವಿರೋಧದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಕಾರ್ಯಕ್ರಮವನ್ನು ತಡೆಹಿಡಿಯುವ ನಿರ್ಣಯ ಕೈಗೊಳ್ಳಲಾಗಿದೆ~ ಎಂದು ಹೇಳಿದ್ದಾರೆ.
`ಮುಖ್ಯವಾಗಿ ಅಮೀರ್ ಖಾನ್, ಶಾರೂಖ್ ಖಾನ್ ಇಲ್ಲವೇ ಭಾರತದಲ್ಲಿ ಕ್ರಿಕೆಟ್ ಆಡುವ ಪಾಕಿಸ್ತಾನದ ತಂಡದಲ್ಲಿರುವ ಇತರೆ ಎಲ್ಲ ಖಾನ್ಗಳಂತಲ್ಲ~ ಎಂದು ಹೇಳಿರುವ ಠಾಕ್ರೆ `(ಅಮೀರ್) ಕಾರ್ಯಕ್ರಮ ಮತ್ತು ಸಿನಿಮಾ ಯಾವಾಗಲೂ ದೇಶಭಕ್ತಿ ಹಾಗೂ ಪ್ರೀತಿಯಲ್ಲಿ ದೇಶದ ಮೆರೆಯನ್ನು ಮೀರಿವೆ. ಅವರು ಯಾವಾಗಲೂ ಯುವಕರಿಗೆ ಸ್ಫೂರ್ತಿ~ ಎಂದು ಬರೆದಿದ್ದಾರೆ.