ಅವುಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಯಶಸ್ವಿಯಾಗಿ ನಿಭಾಯಿಸುವುದರಿಂದ ಯಶಸ್ಸು ಸಿದ್ಧಿಸುತ್ತದೆ. ವ್ಯಕ್ತಿ ತಾಳ್ಮೆಯಿಂದ ಸೃಜನಶೀಲತೆಯಿಂದ ಮನಸ್ಸನ್ನು ಸಂತುಷ್ಟವಾಗಿರಿಸುವುದರಿಂದ ಪ್ರತಿ ಸಮಸ್ಯೆಯ ಮೂಲವನ್ನರಿತು ಅದನ್ನು ಪರಿಪಕ್ವವಾಗಿ ನಿಭಾಯಿಸಬಹುದು ಎಂದರು.
ಉಪಪ್ರಾಂಶುಪಾಲರಾದ ಡಾ.ರಮೇಶ್ ಮಿತ್ಯಂತಾಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಅವಕಾಶಗಳು ಯಾವಾಗ ಬೇಕಾದರೂ ಒಲಿದು ಬರಬಹುದು. ಅದರತ್ತ ಚಿಂತಿಸಿ ಕಾರ್ಯಪ್ರವೃತ್ತರಾದರೆ ಯಶಸ್ಸು ಸಾಧ್ಯ. ವಿದ್ಯಾರ್ಥಿಗಳು ಅವಕಾಶಗಳನ್ನು ಬಾಚಿ ತಮ್ಮದಾಗಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ತಾಂತ್ರಿಕ ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ವಿದ್ಯಾರ್ಥಿ ಶಾಖೆಯ ಪದಾಧಿಕಾರಿಗಳು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.