ಮುಧೋಳ: ವಿದಾನಸಭೆ ಚುನಾವಣೆ ಯ ಹಿನ್ನೆಲೆಯಲ್ಲಿ ಶಾಂತಿ, ಕಾನೂನು ಸುವವ್ಯಸ್ಥೆ ಕಾಪಾಡುವ ದೃಷ್ಟಿಯಿಂದ ಬಿಎಸ್ಎಫ್ ಸಶಸ್ತ್ರ ಪಡೆ, ಕೆ.ಎಸ್.ಆರ್.ಪಿ ಹಾಗೂ ಡಿ.ಆರ್ ಸಶಸ್ತ್ರ ತುಕಡಿಗಳಿಂದ ಪಟ್ಟಣದ ವೀರಶೈವ ಕಲ್ಯಾಣ ಮಟಂಪದಿಂದ ಶಿವಾಜಿ ವೃತ್ತ, ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಪಥಸಂಚಲನ ನಡೆಯಿತು.
ಸಿಪಿಐ ಎಚ್.ಡಿ. ಮುದರೆಡ್ಡಿ, ಪಿಎಸ್ಐ ಎಸ್.ಆರ್.ನಾಯಕ, ಕ್ರೈಂ ಪಿಎಸ್ಐ ಸಂಗಮನಾಥ ಹೊಸಮನಿ, ಲೋಕಾಪುರ ಪಿಎಸ್ಐ ಡಿ.ಹುಲಿಗೆಪ್ಪ ಹಾಗೂ ಶಸಸ್ತ್ರ ಪೊಲೀಸ್ ಪಡೆ ಅಧಿಕಾರಿಗಳು ಪಾಲ್ಗೊಂಡಿದ್ದರು.