ದಾವಣಗೆರೆ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಬುಡಕಟ್ಟು ಹಾಗೂ ಹಿಂದುಳಿದ ವರ್ಗಗಳ ಜನಸಮುದಾಯವೇ ಪ್ರಧಾನವಾಗಿರುವಾಗ, ಬುಡಕಟ್ಟು ಮಹಿಳೆಯೊಬ್ಬರನ್ನು ದಾವಣಗೆರೆ ವಿ.ವಿ. ಕುಲಪತಿಯಾಗಿ ನೇಮಿಸುವುದರಲ್ಲಿ ಅಡೆತಡೆಯಾದರೂ ಏನಿತ್ತು?
ತಳಸಮುದಾಯಗಳ ಬಗ್ಗೆ ರಾಜ್ಯಪಾಲರು ತೋರಿದ ನಿರ್ಲಕ್ಷ್ಯವನ್ನು ಅಪಮಾನವೆಂದೇ ಪರಿಗಣಿಸಬೇಕಾಗಿದೆ. ಇಲ್ಲಿ ಸಾಮಾಜಿಕ ನ್ಯಾಯವನ್ನು ಗಾಳಿಗೆ ತೂರಲಾಗಿದೆ. ಸಂವಿಧಾನವನ್ನು ಎತ್ತಿ ಹಿಡಿಯಬೇಕಾದ ರಾಜ್ಯಪಾಲರೇ ಹಿಂಬಾಗಿಲುಗಳನ್ನು ಹುಟ್ಟುಹಾಕುವುದು ಯಾಕಾಗಿ? ಈ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ಆಗಬೇಕಾಗಿದೆ.