ಬೆಂಗಳೂರು: ಕಮಲ ಗೋಯೆಂಕಾ ಪ್ರತಿಷ್ಠಾನವು ಸಾಹಿತ್ಯಕ ಪ್ರಶಸ್ತಿಗಳಿಗೆ ಪುಸ್ತಕಗಳನ್ನು ಆಹ್ವಾನಿಸಿದೆ. ಹಿಂದಿ–ಕನ್ನಡ ಅನುವಾದ ಕೃತಿಗೆ ನೀಡಲಾಗುವ ‘ಪಿತಾಶ್ರೀ ಗೋಪಿರಾಂ ಗೋಯೆಂಕಾ ಹಿಂದಿ–ಕನ್ನಡ ಭಾಷಾಂತರ ಪಾರಿತೋಷಕ’ವು ₨ 21,000 ನಗದನ್ನು ಒಳಗೊಂಡಿದೆ. ‘ಹಿರಣ್ಮಯಿ ಯುವ ಸಾಹಿತ್ಯಕಾರ್ ಪುರಸ್ಕಾರ್’ ವಿಜೇತರಿಗೆ ₨ 15 ಸಾವಿರ ನಗದನ್ನು ನೀಡಲಾಗುತ್ತದೆ.
2004 ರಿಂದ ಈವರೆಗೆ ಪ್ರಕಟವಾಗಿರುವ ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ ಕೃತಿಗಳ 4 ಪ್ರತಿಗಳು ಮತ್ತು ಮೂಲ ಕೃತಿಯ ಒಂದು ಪ್ರತಿಯನ್ನು ಹಾಗೂ ಯುವ ಬರಹಗಾರರು ತಮ್ಮ ಕೃತಿಯ ಪ್ರತಿಗಳನ್ನು ತಮ್ಮ ಭಾವಚಿತ್ರದೊಂದಿಗೆ ಜ.15 ರೊಳಗೆ ಸಲ್ಲಿಸಲು ಕೋರಿದೆ.
ವಿಳಾಸ : ಕಮಲ ಗೋಯೆಂಕಾ ಪ್ರತಿಷ್ಠಾನ, ನಂ.6, ಕೆ.ಎಚ್.ಬಿ. ಕೈಗಾರಿಕಾ ಪ್ರದೇಶ, 2ನೇ ಅಡ್ಡರಸ್ತೆ, ಯಲಹಂಕ ಉಪನಗರ. ಸಂಪರ್ಕಕ್ಕೆ :
96202 07976.