ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಸಿಎಲ್: ತೆಲುಗು ವಾರಿಯರ್ಸ್‌ಗೆ ಗೆಲುವು

Last Updated 28 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಆದರ್ಶ (ಔಟಾಗದೇ 52) ಹಾಗೂ ತರುಣ್ (ಔಟಾಗದೇ 27) ಅವರ ಉತ್ತಮ ಆಟದ ನೆರವಿನಿಂದ ತೆಲುಗು ವಾರಿಯರ್ಸ್ ಕೇರಳ ಸ್ಟ್ರೈಕರ್ಸ್ ಎದುರು ಒಂಬತ್ತು ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು.

ಮೊದಲು ಬ್ಯಾಟಿಂಗ್ ಮಾಡಿದ ಕೇರಳ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 94 ರನ್ ಗಳಿಸಿತ್ತು. ಈ ಮೊತ್ತ ತೆಲುಗು ತಂಡಕ್ಕೆ ಕಷ್ಟವೆನಿಸಲಿಲ್ಲ. ಅಭಿಮಾನಿಗಳನ್ನು ರನ್ ಹೊಳೆಯಲ್ಲಿ ಸಂಭ್ರಮಿಸುವಂತೆ ಮಾಡಿದ ಆದರ್ಶ ಇನ್ನೂ 29 ಎಸೆತಗಳು ಬಾಕಿ ಇರುವಾಗ ಗೆಲುವನ್ನು ತಂದುಕೊಟ್ಟರು.

16ನೇ ಓವರ್‌ನ ಮೊದಲ ಎಸೆತವನ್ನು ಸ್ಟ್ರೈಟ್‌ಡ್ರೈವ್ ಮೂಲಕ ಬಲಗೈ ಬ್ಯಾಟ್ಸ್‌ಮನ್ ಅದರ್ಶ ಬೌಂಡರಿಗೆ ಅಟ್ಟಿದರು. ಈ ಮೂಲಕ ತೆಲುಗು ಈ ಟೂರ್ನಿಯಲ್ಲಿ ಎರಡನೇ ಗೆಲುವು ತನ್ನದಾಗಿಸಿಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT