ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಬ್ರಹ್ಮಣ್ಯದಲ್ಲಿ 19 ಸೆಂ.ಮೀ.ಮಳೆ

Last Updated 5 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಶುಕ್ರವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ಉತ್ತರ ಒಳನಾಡಿನಲ್ಲಿ ನೈರುತ್ಯ ಮುಂಗಾರು ಕ್ಷೀಣಿಸಿದೆ. ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಮಳೆಯಾಗಿದೆ. ಸುಬ್ರಹ್ಮಣ್ಯದಲ್ಲಿ 19 ಸೆಂ.ಮೀ.ಮಳೆಯಾಗಿದೆ.

ಕಮ್ಮರಡಿ 14, ಮಡಿಕೇರಿ, ಆಗುಂಬೆ 12, ಶೃಂಗೇರಿ 11, ಉಪ್ಪಿನಂಗಡಿ 10, ಸಿದ್ದಾಪುರ, ಭಾಗಮಂಡಲ 9, ಜಯಪುರ 8, ಮಾಣಿ, ಧರ್ಮಸ್ಥಳ, ಕೊಲ್ಲೂರು, ಗೇರುಸೊಪ್ಪ, ಲಿಂಗನಮಕ್ಕಿ 7, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ, ಅಂಕೋಲ, ಮಾದಾಪುರ, ಕೊಪ್ಪ, ಬಾಳೆಹೊನ್ನೂರು 6, ಮೂಡುಬಿದಿರೆ 5, ಮೂಲ್ಕಿ, ಮಂಗಳೂರು ವಿಮಾನ ನಿಲ್ದಾಣ, ಹೊನ್ನಾವರ, ಕುಮಟಾ, ಮೂರ್ನಾಡು, ಹಾರಂಗಿ, ಸೋಮವಾರಪೇಟೆ, ತಾಳಗುಪ್ಪ, ತೀರ್ಥಹಳ್ಳಿ 4, ಕಾರ್ಕಳ, ಶಿರಾಲಿ, ಜೋಯಿಡಾ, ಸಿದ್ದಾಪುರ (ಉ.ಕ), ಶಿರಸಿ, ಲೋಂಡ, ವಿರಾಜಪೇಟೆ, ಕುಶಾಲನಗರ, ಹೊಸನಗರ, ಕೊಟ್ಟಿಗೆಹಾರ, ಆವತಿ 3, ಕುಂದಾಪುರ, ಭಟ್ಕಳ, ಮಂಚಿಕೇರಿ, ಕಾರವಾರ, ಸಕಲೇಶಪುರ 2, ಮಂಗಳೂರು, ಕೋಟ, ಬನವಾಸಿ, ಖಾನಾಪುರ, ಸಾಗರ, ಹುಂಚದಕಟ್ಟೆ, ಚಿಕ್ಕಮಗಳೂರು, ಮೂಡಿಗೆರೆ, ನಾರಾಯಣಪುರ,  ಗೋಪಾಲನಗರದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.

ಮುನ್ಸೂಚನೆ: ಮುಂದಿನ 48 ಗಂಟೆಗಳಲ್ಲಿ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT