2006 ರಲ್ಲಿ ನಾನು ರಾಜಿನಾಮೆ ನೀಡುವ ಅವಧಿಯವರೆಗೂ ಯಾವುದೇ ಸೇವಾ ನಿಯಮವನ್ನು ಉಲ್ಲಂಘನೆ ಮಾಡಿಲ್ಲ. ನನ್ನ ಜಿಪಿಎಫ್ ನಲ್ಲಿ ಸಂಬಂಧಪಟ್ಟ ಹಣವನ್ನು ಕಡಿತ ಮಾಡಿಕೊಳ್ಳುವಂತೆ ನಾನು ಸರ್ಕಾರಕ್ಕೆ ಪತ್ರವನ್ನು ಬರೆದಿರುತ್ತೇನೆ~ ಎಂದು ಕೇಜ್ರಿವಾಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಆದರೂ, ಸರ್ಕಾರ ಇದುವರೆಗೂ ಸಂಬಂಧಿಸಿದ ಹಣವನ್ನು ಕಡಿತ ಮಾಡಿಕೊಂಡಿಲ್ಲ. ನಾಲ್ಕು ವರ್ಷಗಳ ನಂತರ ಇಲಾಖೆ ನೋಟಿಸ್ ಜಾರಿಮಾಡಿದೆ. ಅದು ಗಾಂಧಿವಾದಿ ಅಣ್ಣಾ ಹಜಾರೆ ಅವರು ಪ್ರಬಲ ಲೋಕಪಾಲ್ ಮಸೂದೆ ಮಂಡನೆಗಾಗಿ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ಆರಂಭಿಸುವ ಮುಂಚೆ ನೋಟಿಸ್ ಜಾರಿಗೊಳಿದೆ~ ಎಂದಿದ್ದಾರೆ.