ತೃತೀಯ ವಿಶ್ವ ಸಮರ ತಡೆಗೆ ರಷ್ಯದ ಎಲ್ಲ ಕ್ರಮ
ಮಾಸ್ಕೊ, ಸೆ. 11 - ತೃತೀಯ ವಿಶ್ವ ಸಮರವು ಆರಂಭವಾಗುವುದನ್ನು ತಡೆಯಲು ರಷ್ಯವು ತನ್ನ ಕೈಲಾದುದನ್ನೂ ಮಾಡುತ್ತಿದೆಯೆಂದು ಸೋವಿಯತ್ ಪ್ರಧಾನ ಮಂತ್ರಿ ನಿಕಿಟ ಖ್ರುಶ್ಚೋವ್ರವರು ಇಂದು ಮತ್ತೆ ತಿಳಿಸಿದರು.
ಆದರೆ ಸಾಮ್ರಾಜ್ಯವಾದಿಗಳೇನಾದರೂ ಯುದ್ಧವನ್ನು ಆರಂಭಿಸಿದರೆ ಅವರ ಅಂತ್ಯವಾಗುವುದೆಂದು ಅವರು ಎಚ್ಚರಿಕೆಯಿತ್ತರೆಂದೂ ಮಾಸ್ಕೊ ರೇಡಿಯೊ ತಿಳಿಸಿತು.
ವಿದ್ಯುತ್ ಅಭಾವ ನೀಗಿಸಲು ಡೀಸಲ್ ಯಂತ್ರಗಳ ಸ್ಥಾಪನೆ
ಬೆಂಗಳೂರು, ಸೆ. 11 - ಜಲಮೂಲ ವಿದ್ಯುಚ್ಛಕ್ತಿಯ ಅಭಾವದ ಕಾರಣ, ಡೀಸಲ್ ಯಂತ್ರಗಳನ್ನು ಸ್ಥಾಪಿಸುವಂತೆ ಪ್ರೋತ್ಸಾಹ ನೀಡುವುದರ ಮೂಲಕ ಸಣ್ಣ ಕೈಗಾರಿಕೆಗಳಿಗೆ ಸಹಾಯ ಮಾಡಲು ಸರ್ಕಾರ ಪ್ರಯತ್ನಿಸುವುದಾಗಿ ಮುಖ್ಯಮಂತ್ರಿ ಶ್ರೀ ಬಿ. ಡಿ. ಜತ್ತಿ ಅವರು ಇಲ್ಲಿ ಇಂದು ತಿಳಿಸಿದರು.