ರಾಷ್ಟ್ರಪತಿಯಿಂದ ನಾಗಾಲ್ಯಾಂಡ್ ಉದ್ಘಾಟನೆ
ಕೊಹಿಮಾ, ಡಿ. 1– ಭಾರತ ಗಣರಾಜ್ಯದಲ್ಲಿ ಹದಿನಾರನೇ ರಾಜ್ಯವಾಗಿ ಅವತರಿಸುತ್ತಿರುವ ನಾಗಾಲ್ಯಾಂಡ್ ರಾಜ್ಯದ ಉದ್ಘಾಟನೆ ಇಂದು ಇಲ್ಲಿ ರಾಷ್ಟ್ರಪತಿ ಡಾ. ರಾಧಾಕೃಷ್ಣನ್ರವರಿಂದ ನೆರವೇರಿತು. ವರ್ಣರಂಜಿತ ಉಡುಪು ಧರಿಸಿದ ನಾಗಾ ಪುರುಷರು, ಮಹಿಳೆಯರು, ಮಕ್ಕಳು, ಸುಮಾರು ಹತ್ತು ಸಹಸ್ರಮಂದಿ ಈ ಸಮಾರಂಭದಲ್ಲಿ ಭಾಗವಹಿಸಿದ್ದರು.
ಭಾರತದ ಮತ್ತೊಂದು ರಾಕೆಟ್ ಪ್ರಯೋಗ
ಜೈಪುರ, ಡಿ. 1– ಅಂತರಿಕ್ಷದ ಶಾಂತಿಯುತ ಸಂಶೋಧನೆಗಾಗಿ ಭಾರತವು ಮತ್ತೊಂದು ರಾಕೆಟ್ ಅನ್ನು ಜನವರಿಯಲ್ಲಿ ಪ್ರಯೋಗಿಸಬಹುದೆಂದು ಭಾರತದ ಅಂತರಿಕ್ಷ ಸಂಶೋಧನಾ ಸಮಿತಿಯ ಅಧ್ಯಕ್ಷ ಡಾ. ವಿಕ್ರಂ ಸಾರ ಭಾಯ್ ವರದಿಗಾರರಿಗೆ ತಿಳಿಸಿದರು.