ಬೆಂಗಳೂರು: ಸೌತ್ ಸೆಂಟ್ರಲ್ ರೈಲ್ವೆ ತಂಡದವರು ಬೆಂಗಳೂರು ಮಹಾನಗರ ಪಾಲಿಕೆ ಆಶ್ರಯದಲ್ಲಿ ನಡೆದ ಅಖಿಲ ಭಾರತ ‘ಎ’ ದರ್ಜೆ ಮೇಯರ್ಸ್ ಕಪ್ ಕಬಡ್ಡಿ ಟೂರ್ನಿಯ ಮಹಿಳೆಯರ ವಿಭಾಗದಲ್ಲಿ ಪ್ರಶಸ್ತಿಯನ್ನು ಮಡಿಗೇರಿಸಿಕೊಂಡರು. ಜೆ.ಪಿ. ನಗರ ಎರಡನೇ ಹಂತದ ದುರ್ಗಾ ಪರಮೇಶ್ವರಿ ಆಟದ ಮೈದಾನದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಸೌತ್ ಸೆಂಟ್ರಲ್ ರೈಲ್ವೆ 24-20ಪಾಯಿಂಟ್ಗಳಿಂದ ಕೆಎಸ್ಪಿ ತಂಡವನ್ನು ಮಣಿಸಿತು.
ವಿರಾಮದ ವೇಳೆಗೆ 8-7ರಲ್ಲಿ ಮುನ್ನಡೆ ಹೊಂದಿದ್ದ ವಿಜಯಿ ತಂಡ ನಂತರ ಚುರುಕಿನ ಆಟವಾಡಿ ರೋಚಕ ಗೆಲುವನ್ನು ತನ್ನದಾಗಿಸಿಕೊಂಡಿತು. ಆತಿಥೇಯ ಕೆಎಸ್ಪಿ ರನ್ನರ್ ಅಪ್ಗೆ ತೃಪ್ತಿ ಪಡಬೇಕಾಯಿತು. ಇದಕ್ಕೂ ಮುನ್ನ ನಡೆದ ನಾಲ್ಕರ ಘಟ್ಟದ ಪಂದ್ಯದಲ್ಲಿ ಕೆಎಸ್ಪಿ ತಂಡದ ಆಟಗಾರ್ತಿಯರು 22-19ಪಾಯಿಂಟ್ಗಳಿಂದ ದೆಹಲಿಯ ಪಾಲಂ ತಂಡವನ್ನು (ವಿರಾಮದ ಸ್ಕೋರು 10-11), ಮಣಿಸಿ ಫೈನಲ್ ಪ್ರವೇಶಿಸಿದ್ದರು.
ಇನ್ನೊಂದು ನಾಲ್ಕರ ಘಟ್ಟದ ಪಂದ್ಯದಲ್ಲಿ ಸೌತ್ ಸೆಂಟ್ರಲ್ ರೈಲ್ವೆ 29-10ಪಾಯಿಂಟ್ಗಳಿಂದ (ವಿರಾಮದ ಸ್ಕೋರು 14-0) ಹರಿಯಾಣದ ಬಾಬಾ ಹರಿದಾಸ ತಂಡವನ್ನು ಮಣಿಸಿತು.
ಪುರುಷರ ವಿಭಾಗದ ಸೆಮಿಫೈನಲ್ ಪಂದ್ಯಗಳಲ್ಲಿ ಎಚ್ಎಎಲ್ 8-7ಪಾಯಿಂಟ್ಗಳಲ್ಲಿ ದೆಹಲಿಯ ಬಿಎಸ್ಎಫ್ ತಂಡದವರು (ವಿರಾಮದ ಸ್ಕೋರು 3-6) ಮೇಲೆ ರೋಚಕ ಗೆಲುವು ಪಡೆದರು.
ಇನ್ನೊಂದು ಪಂದ್ಯದಲ್ಲಿ ಸೌತ್ ಸೆಂಟ್ರಲ್ ರೈಲ್ವೆ 29-10ಪಾಯಿಂಟ್ಗಳಿಂದ ಹರಿಯಾಣದ ಬಾಬಾ ಹರಿದಾಸ ತಂಡವನ್ನು (ವಿರಾಮದ ಸ್ಕೋರು 14-4) ಮಣಿಸಿ ಫೈನಲ್ ಪ್ರವೇಶಿಸಿತು.ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತ ಕಬಡ್ಡಿ ಫೆಡರೇಷನ್ ಮುಖ್ಯಸ್ಥ ಎಂ.ಸೀತಾರಾಮ್, ಬಿಬಿಎಂಪಿ ಆಯುಕ್ತ ಸಿದ್ದಯ್ಯ, ಮೇಯರ್ ಎಸ್.ಕೆ. ನಟರಾಜ್, ಶಾಸಕ ಬಿ.ಎನ್. ವಿಜಯ್ಕುಮಾರ್, ನಗರಸಭಾ ಸದಸ್ಯರಾದ ಬಿ.ಎಸ್. ಸತ್ಯನಾರಾಯಣ, ಚಂದ್ರಶೇಖರ ರಾಜು ಇತರರು ಉಪಸ್ಥಿತರಿದ್ದರು. ವೈಯಕ್ತಿಕ ಪ್ರಶಸ್ತಿ: ಬೆಸ್ಟ್ ರೈಡರ್: ಜಯಂತಿ (ಕೆಎಸ್ಪಿ); ಬೆಸ್ಟ್ ಕ್ಯಾಚರ್: ಕಾಂತಿ (ಬಾಬಾ ಹರಿದಾಸ್); ಬೆಸ್ಟ್ ಆಲ್ರೌಂಡರ್: ಮಮತಾ ಪೂಜಾರಿ (ಸೌತ್ ಸೆಂಟ್ರಲ್ ರೈಲ್ವೆ).