ಅದೂ ಹುಸಿಯಾಯಿತು. ಈಗ ಮೈಲಾರ ಕ್ಷೇತ್ರದ ‘ಅಂಬಲಿ ಹಳಸೀತು, ಕಂಬಳಿ ಬೀಸಿತಲೇ...’ ಎಂಬ ಮೈಲಾರಲಿಂಗನ ಕಾರಣೀಕವನ್ನು ಅಪಹರಿಸಿ ತಮ್ಮದಾಗಿ ಮಾಡಿಕೊಂಡು ಡೋಂಗಿ ಬಿಡುತ್ತಿದ್ದಾರೆ. ಸರ್ಕಾರ, ಸಮಾಜ, ರಾಜಕೀಯ ವಲಯಗಳ ಮಾನಸಿಕ ಸ್ಥಿತಿಯ ಮೇಲೆ ಆಟವಾಡುವ ಇಂಥ ಸ್ವಾಮೀಜಿಗಳ ಭವಿಷ್ಯವಾಣಿಗೆ ಕಿಮ್ಮತ್ತು ಕೊಡಬಾರದು.
ನಮ್ಮ ಕಡೆ– ಕಡೂರು, ತರೀಕೆರೆ, ಬೀರೂರು, ಅಜ್ಜಂಪುರ– ಮಕ್ಕಳು ಉಡಾಫೆ ಮಾತಾಡಿದರೆ, ‘ನೋಡೋ ಕೋಡಿ(ಹಳ್ಳಿ)ಸ್ವಾಮಿ ಆಡಿದಂಗ ಆಡಬೇಡ’ ಎಂಬ ನುಡಿ ಜನಜನಿತವಾಗಿದೆ.
– ಶಾರದಮ್ಮ ಕೆ.ಬಿ. ಕಡೂರು.