ಹಜಾರೆ ಅವರು ಆಗಸ್ಟ್ 16 ರಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವ ನಿರ್ಧಾರಕ್ಕೆ ತಾವು ಕೇವಲ ಸಲಹೆಯನ್ನಷ್ಟೇ ನೀಡಿದ್ದೇನೆ. ಉಪವಾಸಕ್ಕಿಂತ ಪ್ರವಾಸ ಮಾಡಿ ಜನತೆಗೆ ವಿಷಯ ಮುಟ್ಟಿಸಬೇಕೆಂದು. ಅಷ್ಟೆ ಹೊರತು ತಮಗೂ ಹಜಾರೆ ಅವರಿಗೂ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಅವರು ತಿಳಿಸಿದರು. ಅಲ್ಲದೆ ಒಂದು ವೇಳೆ ಹಜಾರೆ ಅವರು ಉಪವಾಸ ಕುಳಿತಲ್ಲಿ ತಾವು ಸಂಪೂರ್ಣ ಬೆಂಬಲ ನೀಡುವುದಾಗಿಯೂ ಘೋಷಿಸಿದರು.