ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲವು ಹೊಳಹು ನೀಡುವ ಕವಿತೆಗಳು

Last Updated 6 ಮೇ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಕವಿತೆಗಳು ಒಂದೇ ಓದಿಗೆ ದಕ್ಕಬಾರದು. ಸಿದ್ದರಾಮಯ್ಯ ಅವರ ಕವಿತೆಗಳು ಮತ್ತೆ ಮತ್ತೆ ಓದಿಯೇ ದಕ್ಕಿಸಿಕೊಳ್ಳುವಂತೆ ಪ್ರೇರೇಪಿಸುತ್ತದೆ~ ಎಂದು ವಿಮರ್ಶಕ ಡಾ.ಎಚ್.ಎಸ್.ರಾಘವೇಂದ್ರರಾವ್ ಅಭಿಪ್ರಾಯಪಟ್ಟರು.

ಕರೆಬಳಗವು ನಗರದಲ್ಲಿ ಭಾನುವಾರ ಆಯೋಜಿಸಿದ್ದ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರ `ಕಾಲ ಕಣ್ಣಿಯ ಹಂಗು~ ಈವರೆಗಿನ ಕವಿತೆಗಳ ಸಂಪುಟವನ್ನು ಬಿಡುಗಡೆ ಮಾಡಿ ಮಾತನಾಡಿದರು.

`ನೆಲದ ಸಂಸ್ಕೃತಿ, ನೆನಪು ಮತ್ತು ಕನಸುಗಳನ್ನು ಒಟ್ಟಿಗೆ ಒಂದು ಭಾಷೆಯಲ್ಲಿ ಕಟ್ಟಿಕೊಡುವ ಮೂಲಕ ವಿಭಿನ್ನ ಕಾವ್ಯ ಪ್ರಕಾರವನ್ನು ಅಳವಡಿಸಿಕೊಂಡಿದ್ದಾರೆ. ಇವರ ಕವಿತೆಗಳಲ್ಲಿ ಸಂಚಾರಿ ಭಾವವಿದ್ದರೂ, ಮೂಲದಲ್ಲಿ ಒಂದು ಸ್ಥಾಯಿ ಭಾವವನ್ನು ಉಳಿಸಿಕೊಂಡಿದೆ~ ಎಂದು ಹೇಳಿದರು.

`ಕವಿತೆಗಳು ಕಾಲದೊಂದಿಗಿನ ಸಂವಾದದ ಜತೆಯಲ್ಲಿಯೇ ಕವಿಯ ಜೀವನದರ್ಶನ ಮತ್ತು ಕಲಾದರ್ಶನಕ್ಕೆ ಆಸ್ಪದ ನೀಡುತ್ತದೆ. ಜಾಗತೀಕರಣ ಮತ್ತು ಉದಾರಿಕರಣದ ಹಿನ್ನೆಲೆಯಲ್ಲಿಯೂ ಈ ಕವಿತೆಗಳು ಹಲವು ಹೊಳಹುಗಳನ್ನು ನೀಡುತ್ತದೆ~ ಎಂದರು.

ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಾ.ಅಜಯಕುಮಾರ್ ಸಿಂಹ, `ಕವಿತೆಯ ರಚನೆಯ ಕೇವಲ ವ್ಯಕ್ತಿಯಲ್ಲಿ ಆನಂದ ಉಂಟುಮಾಡುವುದಲ್ಲದೆ,  ವಿವೇಕ ಮತ್ತು ಜ್ಞಾನವನ್ನು ಹೆಚ್ಚಿಸುತ್ತದೆ. ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ಅವರ ಕವಿತೆಗಳು ಪ್ರಮುಖವಾಗಿದೆ~ ಎಂದು ಹೇಳಿದರು.

`ಗೂಡಾನ್ವೇಷಣೆ ಮತ್ತು ಮಾನವೀಯ ಮೌಲ್ಯಗಳ ಸತ್ವವನ್ನು ಸಾಹಿತ್ಯ ಮಾತ್ರ ಸ್ಪಷ್ಟವಾಗಿ ತಿಳಿಸಬಲ್ಲದು. ಕಾವ್ಯ, ನಾಟಕ, ಕಾದಂಬರಿ ಹೀಗೆ ವಿವಿಧ ಪ್ರಕಾರಗಳು ವ್ಯಕ್ತಿತ್ವ ವಿಕಸನಂದಂತಹ ಪ್ರಕ್ರಿಯೆಯಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತವೆ~ ಎಂದು ಹೇಳಿದರು.

ಸಮುದಾಯ ತಂಡವು ಇದೇ ಸಂದರ್ಭದಲ್ಲಿ ಕವಿತೆಯ ರಂಗರೂಪ ಪ್ರಸ್ತುತ ಪಡಿಸಿತು. ಲೇಖಕಿ ದು.ಸರಸ್ವತಿ, ಕಣ್ವ ಪ್ರಕಾಶನದ ಎಂ.ಆರ್.ಗಿರಿರಾಜು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT