ಮುಖ್ಯಮಂತ್ರಿ ಕಳುಹಿಸಿದ ಪಟ್ಟಿಯಲ್ಲಿನ ವ್ಯಕ್ತಿಯ ಬಗ್ಗೆ ರಾಜ್ಯಪಾಲರಿಗೆ ಅನುಮಾನಗಳಿದ್ದರೆ ಅವರು ಆ ಹೆಸರನ್ನು ಕೈಬಿಡಲು ಸೂಚಿಸಬಹುದು. ಆದರೆ ಹಿರೇಮಠ ಅವರು ಮುಖ್ಯಮಂತ್ರಿಯೂ ಅಲ್ಲ, ರಾಜ್ಯ ಪಾಲರೂ ಅಲ್ಲ, ರಾಷ್ಟ್ರಪತಿಯೂ ಅಲ್ಲ. ಚುನಾ ವಣಾ ಆಯೋಗವೂ ಅಲ್ಲ. ಆದರೂ ಅವರು ನನ್ನ ಬಗ್ಗೆ ಆರೋಪ ಮಾಡು ತ್ತಾರೆ’ ಎಂದು ರಮೇಶ್ ದೂರಿದರು.
‘ನಾನು ಐದನೇ ಬಾರಿಗೆ ವಿಧಾನ ಸಭೆಗೆ ಆಯ್ಕೆಯಾಗಿದ್ದೇನೆ. ಅಧಿವೇಶನ ಪ್ರಾರಂಭವಾಗುವ ಕಾಲದಲ್ಲಿಯೇ ನನ್ನ ಮೇಲೆ ಆರೋಪಗಳು ಕೇಳಿಬರುತ್ತವೆ. ಇದರ ಉದ್ದೇಶ ಏನು? ನಾನು ಯಾರಿಗೂ ಮುಖ ತೋರಿಸಬಾರದು ಎಂದು ತಾನೆ? ನನ್ನ ಹೆಂಡತಿ ಮಕ್ಕಳ ಗತಿ ಏನು? ನಾನು ಸಮಾಜಕ್ಕೆ ಮುಖ ತೋರಿಸುವುದು ಹೇಗೆ’ ಎಂದು ಭಾವುಕರಾದರು.