ಮಕ್ಕಳು, ಗಣ್ಯರು ಭಾಗವಹಿಸಿ, ಮೆರವಣಿಗೆ ಮೆರಗು ಹೆಚ್ಚಿಸಿದ್ದರು. ಪಲ್ಲಕ್ಕಿ ಶ್ರೀಮಠಕ್ಕೆ ತಲುಪಿದ ನಂತರ ಭಕ್ತಾದಿಗಳು ಶ್ರೀಗಳ ತುಲಾಭಾರ ಮೂಲಕ ಭಕ್ತಿಸೇವೆ ಸಲ್ಲಿಸಿದರು. ತಾಲ್ಲೂಕಿನ ಇಟಗಾ ಯೋಗಾಶ್ರಮ ಬಾಲಯೋಗಿ ಚನ್ನಲ್ಲೇಶ್ವರ ಸ್ವಾಮೀಜಿ, ಸದಲಾಪೂರ ಸ್ವಾಮೀಜಿ ಆಶೀರ್ವಚನ ನೀಡಿದರು.
ದೇವಸ್ಥಾನ ಸದ್ಭಭಕ್ತರಾದ ಶಿವಾನಂದ ಉಳ್ಳಾಗಡ್ಡೆ, ರಾಜಕುಮಾರ ಧುಮ್ಮನಸೂರ, ಸೋಮನಾಥ ಪಾಟೀಲ, ಗುರಪ್ಪ ಉಡುಮನಳ್ಳಿ, ಸಂಗಪ್ಪ ಮೇಲಶೆಟ್ಟಿ, ಕರಿಬಸಯ್ಯಸ್ವಾಮಿ, ಮಲ್ಲಿಕಾರ್ಜುನ ಮೂಲಗಿ, ಬಸವರಾಜ ಮುತ್ತಂಗಿ, ಶ್ರೀಧರ, ಸಂಗಪ್ಪ ಖನಶೆಟ್ಟಿ ಇದ್ದರು.