ಬೀದರ್: ‘ಕುರುಡು ನಂಬಿಕೆ’ ಕಿರುಚಿತ್ರದ ಡಿವಿಡಿಯನ್ನು ನಗರದಲ್ಲಿ ಈಚೆಗೆ ನಡೆದ ಜಿಲ್ಲಾ ದ್ವಿತೀಯ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷೆ ನೀಲಾ ಕೆ. ಬಿಡುಗಡೆ ಮಾಡಿದರು. ಬೀದರ್ನವರೇ ಆದ ಮಹೇಶ್ ವಿ. ಪಾಟೀಲ್ ನಿರ್ದೇಶಿಸಿರುವ ಕಿರುಚಿತ್ರ ಬೆತ್ತಲೆ ಸೇವೆಯಂಥ ಮೂಢ ನಂಬಿಕೆಯನ್ನು ಎಳೆ ಎಳೆಯಾಗಿ ಬಿಡಿಸಿಡುತ್ತದೆ.
ಅಸಿಮಾ ಭಟ್ ನಾಯಕಿಯಾಗಿದ್ದಾರೆ. ಸ್ಥಳೀಯ ಕಲಾವಿದರಾದ ಶಂಭುಲಿಂಗ ವಾಲ್ದೊಡ್ಡಿ, ವಿಜಯಶ್ರೀ ಸ್ವಾಮಿ, ರಾಯಲ್ ಮೇಥಿವ್, ಪಾರ್ವತಿ ಜೆ.ಡಿ., ಚಂದ್ರಗುಪ್ತ ಚಾಂದಕವಠೆ, ಕಮಲಮ್ಮ ಅಪ್ಪಾರಾವ್, ಸಂಗೀತಾ ಕಡ್ಡೆ, ದೇವಿದಾಸ್ ಚಿಮಕೋಡೆ, ಯೇಸುದಾಸ್ ಅಲಿಯಂಬುರೆ, ರಮೇಶ್ ಡಿ.ಎ.ಆರ್., ತೇಜಸ್ವಿನಿ ಲೋಕೇಶ್, ಎಸ್. ಲೋಕೇಶ್, ಕಿರಣ ಸ್ವಾಮಿ, ಋಷಿ ಶ್ರೀಸಂದ, ರಾಮಲು ಬಾಬುರಾವ್, ಬೆಟ್ಟಮ್ಮ ಬಾಬುರಾವ್ ನಟಿಸಿದ್ದಾರೆ ಎಂದು ಹೇಳಿಕೆ ತಿಳಿಸಿದೆ.