ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಧ್ರುವ’ ಹಸ್ತಾಂತರ

Last Updated 14 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಎಚ್‌ಎಎಲ್‌ನ ‘ಧ್ರುವ’ ಹೆಲಿಕಾಪ್ಟರ್‌ನ್ನು ಮಾಲ್ಡೀವ್ಸ್‌ ದೇಶದ ರಕ್ಷಣಾ ಪಡೆಗಳಿಗೆ ಶನಿವಾರ ಹಸ್ತಾಂತರ ಮಾಡಲಾಯಿತು.

ಕೊಚ್ಚಿಯ ನೌಕಾನೆಲೆಯಲ್ಲಿ ನಡೆದ ಸಮಾರಂಭದಲ್ಲಿ ಮಾಲ್ಡೀವ್ಸ್‌ ರಕ್ಷಣಾ ಸಚಿವ ಮೊಹಮದ್‌ ನಜೀಮ್‌ ಅವರಿಗೆ ಹೆಲಿಕಾಪ್ಟರ್‌ನ್ನು ಸಾಂಕೇತಿಕ­ವಾಗಿ ಹಸ್ತಾಂತರ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ನಜೀಮ್‌ ಅವರು ‘ಭಾರತದಿಂದ ಸಿಕ್ಕ ಅಮೂಲ್ಯವಾದ ಕೊಡುಗೆ ಇದು’ ಎಂದು ಬಣ್ಣಿಸಿದರು.

ಎಚ್‌.ಎ.ಎಲ್‌ ಅಧ್ಯಕ್ಷ ಡಾ.ಆರ್‌.ಕೆ.­ತ್ಯಾಗಿ, ‘ಧ್ರುವ ಹೆಲಿಕಾಪ್ಟರ್‌ ಅನ್ನು ಮಾಲ್ಡೀವ್ಸ್‌ಗೆ ಹಸ್ತಾಂತರ ಮಾಡಿದ್ದು ಹೆಮ್ಮೆಯ ವಿಷಯ. ಹೊಸ ವರ್ಷದ ಆರಂಭದಲ್ಲಿ ಅದು ಮಾಲ್ಡೀವ್ಸ್‌ ತಲುಪಲಿದೆ’ ಎಂದರು.

ರಕ್ಷಣಾತ್ಮಕ ಕಾರ್ಯಗಳು ಸೇರಿ­ದಂತೆ ನಾಗರಿಕ ಉದ್ದೇಶಗಳಿಗೂ ಈ ಹೆಲಿಕಾಪ್ಟರ್‌ ಅನ್ನು ಬಳಸ­ಬಹುದು. ವಿಕೋಪ ಸಂಭವಿಸಿದಾಗ ಇದು ಅತ್ಯುತ್ತಮ ಸೇವೆ ನೀಡಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT