ಬೆಂಗಳೂರು: ಎಚ್ಎಎಲ್ನ ‘ಧ್ರುವ’ ಹೆಲಿಕಾಪ್ಟರ್ನ್ನು ಮಾಲ್ಡೀವ್ಸ್ ದೇಶದ ರಕ್ಷಣಾ ಪಡೆಗಳಿಗೆ ಶನಿವಾರ ಹಸ್ತಾಂತರ ಮಾಡಲಾಯಿತು.
ಕೊಚ್ಚಿಯ ನೌಕಾನೆಲೆಯಲ್ಲಿ ನಡೆದ ಸಮಾರಂಭದಲ್ಲಿ ಮಾಲ್ಡೀವ್ಸ್ ರಕ್ಷಣಾ ಸಚಿವ ಮೊಹಮದ್ ನಜೀಮ್ ಅವರಿಗೆ ಹೆಲಿಕಾಪ್ಟರ್ನ್ನು ಸಾಂಕೇತಿಕವಾಗಿ ಹಸ್ತಾಂತರ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನಜೀಮ್ ಅವರು ‘ಭಾರತದಿಂದ ಸಿಕ್ಕ ಅಮೂಲ್ಯವಾದ ಕೊಡುಗೆ ಇದು’ ಎಂದು ಬಣ್ಣಿಸಿದರು.
ಎಚ್.ಎ.ಎಲ್ ಅಧ್ಯಕ್ಷ ಡಾ.ಆರ್.ಕೆ.ತ್ಯಾಗಿ, ‘ಧ್ರುವ ಹೆಲಿಕಾಪ್ಟರ್ ಅನ್ನು ಮಾಲ್ಡೀವ್ಸ್ಗೆ ಹಸ್ತಾಂತರ ಮಾಡಿದ್ದು ಹೆಮ್ಮೆಯ ವಿಷಯ. ಹೊಸ ವರ್ಷದ ಆರಂಭದಲ್ಲಿ ಅದು ಮಾಲ್ಡೀವ್ಸ್ ತಲುಪಲಿದೆ’ ಎಂದರು.
ರಕ್ಷಣಾತ್ಮಕ ಕಾರ್ಯಗಳು ಸೇರಿದಂತೆ ನಾಗರಿಕ ಉದ್ದೇಶಗಳಿಗೂ ಈ ಹೆಲಿಕಾಪ್ಟರ್ ಅನ್ನು ಬಳಸಬಹುದು. ವಿಕೋಪ ಸಂಭವಿಸಿದಾಗ ಇದು ಅತ್ಯುತ್ತಮ ಸೇವೆ ನೀಡಿದೆ ಎಂದರು.