ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿನಯವಂತಿಕೆಯಿಂದ ಕಾದಂಬರಿ ರಚಿಸಿ’

Last Updated 1 ಜನವರಿ 2014, 20:00 IST
ಅಕ್ಷರ ಗಾತ್ರ

ರಾಜರಾಜೇಶ್ವರಿನಗರ: ‘ವಿನಯವಂತಿಕೆ, ಹೃದಯಾಳ­ದಿಂದ ಕಾದಂಬರಿ ರಚಿಸಬೇಕಾಗಿದೆ. ಕಾವ್ಯ ಮತ್ತು ಕವಿತೆ ಮನುಷ್ಯ ಸಂಬಂಧ ಗಟ್ಟಿಗೊಳಿಸು­ತ್ತದೆ’ ಎಂದು ಲೇಖಕ ಶೂದ್ರ ಶ್ರೀನಿವಾಸ್‌ ಅಭಿಪ್ರಾಯ­ಪಟ್ಟರು.

ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಅಕ್ಕ ಪ್ರಕಾಶನ ವತಿಯಿಂದ ಈಚೆಗೆ ನಡೆದ ವಿಜಯಕುಮಾರ್‌ ಅವರ ‘ಅಂತ­ರಾಳದ ಅಳಲು’ ಹಾಗೂ  ‘ನಿರ್ಮಾಣ’ ಕೃತಿಗಳ ಬಿಡು­ಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಕವಿ ಸಿದ್ದ­ಲಿಂಗಯ್ಯ, ‘ಕವಿತೆ, ಕಾದಂಬರಿಗಳಿಗೆ ಬೆಲೆ ಕಟ್ಟಲು ಸಾಧ್ಯವಾಗದು. ಬಡವರ ಬಗ್ಗೆ, ಶೋಷಿತರ ಜನರ ಕಷ್ಟ ದುಃಖ­ಗಳನ್ನು ತಿಳಿದು ಕಾದಂಬರಿಗಳನ್ನು ರಚಿಸ­ಬೇಕು. ಯುವ ಬರಹ­ಗಾರರು ಅವ­ಕಾಶ ಸಿಕ್ಕಾಗ ಮಹಾನ್‌ ಕವಿಗಳ, ವಿದ್ವಾಂಸರ ಕಾವ್ಯಗಳನ್ನು ಅಧ್ಯಯನ ಮಾಡಿ ಸಮಾಜ ಸುಧಾರಣೆ ಕಾರ್ಯ­ದಲ್ಲಿ ತೊಡಗಬೇಕು’ ಎಂದು ಸಲಹೆ ನೀಡಿದರು.

ವಿಮರ್ಶಕ ಪ್ರೊ.ನಾರಾಯಣಘಟ್ಟ, ‘ಕಾವ್ಯಗಳು ಭಾವ ಮತ್ತು ಜ್ಞಾನ ನೀಡ­ಬೇಕು. ಜೊತೆಗೆ ಸಮಾಜದ ಆರೋಗ್ಯ­ಕರ ವಿಮರ್ಶೆ ಮಾಡಬೇಕು. ಆ ಮೂಲಕ ಬದಲಾವಣೆಗೆ ನಾಂದಿ ಹಾಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT