ಹಸಿರು ಸಿರಿಯಲಿ.. ಮನಸು ಮೆರೆಯಲಿ...
ಬೆಳಿಗ್ಗೆ ಸಣ್ಣಗೆ ಹನಿಯುತ್ತಿದ್ದ ಮಳೆ ದೇವರಾಯನದುರ್ಗಕ್ಕೆ ಹೋಗುವ ಆಸೆಗೆ ಭಂಗ ತರುವ ಲಕ್ಷಣ ಕಾಣುತ್ತಿತ್ತು. ಹೋಗುವುದೋ ಬಿಡುವುದೋ ಎಂಬ ಗೊಂದಲದಲ್ಲಿಯೇ ಕ್ಯಾಮೆರಾ ಹೆಗಲೇರಿ ಕುಳಿತಿತು. ಬೈಕ್ ಚಾಲು ಮಾಡಿ ಇಕ್ಕೆಲಕ್ಕೆ ಹಬ್ಬಿದ ಗಿಡಮರ, ಬಳ್ಳಿಗಳ ನಡುವಿನ ರಸ್ತೆಯಲ್ಲಿ ಹಾದು ಹೋಗುವಾಗ ಯಾವ ಮಳೆಯೂ ಗಮನಕ್ಕೆ ಬರಲಿಲ್ಲ. ಸುಯ್ ಗುಡುತ್ತಿದ್ದ ತಂಪು ಗಾಳಿ, ಮಳೆಯಿಂದ ಹಚ್ಚ ಹಸಿರಾದ ಬೆಟ್ಟ ಒಂಥರಾ ವಿಭಿನ್ನ ಅನುಭವ ನೀಡುತ್ತಿತ್ತು.Last Updated 25 ಜೂನ್ 2018, 20:16 IST