ಚಾಲಕ ಕಂ ನಿರ್ವಾಹಕ ವ್ಯವಸ್ಥೆ ರದ್ದುಪಡಿಸಿ
ಬೊಮ್ಮನಹಳ್ಳಿಯಿಂದ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ವಾಹನ ಸಂಖ್ಯೆ 1824ರಲ್ಲಿ ಮಾರ್ಚ್ 31ರಂದು ಬೆಳಿಗ್ಗೆ 6.15ಕ್ಕೆ ಪ್ರಯಾಣಿಸಿದೆ. ಈ ಬಸ್ಸಿನಲ್ಲಿ ಚಾಲಕ ಮತ್ತು ನಿರ್ವಾಹಕ ಒಬ್ಬರೇ ಆಗಿದ್ದರು. ನಾಲ್ಕೈದು ಪ್ರಯಾಣಿಕರು ಬೊಮ್ಮನಹಳ್ಳಿಯಲ್ಲಿ ಹತ್ತಿದರು. ಕೈಚೀಲ ಹಿಡಿದ ಕೆಲವರಿಗೆ ಹಿಡಿಯಲು ಅಥವಾ ಒರಗಿಕೊಳ್ಳಲು ಸೂಕ್ತ ಆಧಾರಗಳಿಲ್ಲದೆ ಓಲಾಡುತ್ತಿದ್ದರು. ಇಂಥ ಪರಿಸ್ಥಿತಿಯಲ್ಲಿ ಟಿಕೆಟ್ ಪಡೆಯುವುದು ಸವಾಲೆನಿಸಿತ್ತು. ಹಿಂದಿನಿಂದ ವಾಹನಗಳ ಹಾರನ್, ಒಳಗೆ ಪ್ರಯಾಣಿಕರ ಗಡಿಬಿಡಿ. ಚಾಲಕರಿಗೆ ಬಸ್ ಚಲಾಯಿಸುತ್ತಲೇ ಟಿಕೆಟ್ ನೀಡಬೇಕಾದ ಅನಿವಾರ್ಯತೆ.Last Updated 15 ಏಪ್ರಿಲ್ 2013, 19:59 IST