ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
್ರವೀಣ ಕುಲಕರ್ಣಿ

ಪ್ರವೀಣ ಕುಲಕರ್ಣಿ

ಪ್ರಜಾವಾಣಿಯ ಸುದ್ದಿ ಸಂಪಾದಕರಾಗಿರುವ ಪ್ರವೀಣ್ ಕುಲಕರ್ಣಿ, ವಿವಿಧ ಬ್ಯುರೋಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಉತ್ತರ ಕರ್ನಾಟಕದ ಮಾನವೀಯ ಆಸಕ್ತಿಯ ವರದಿಗಳನ್ನು ನೀಡಿರುವ ಅವರಿಗೆ ಕ್ರೀಡೆ ಕೂಡ ಆಸಕ್ತಿಯ ಕ್ಷೇತ್ರ.
ಸಂಪರ್ಕ:
ADVERTISEMENT

ಆಳ-ಅಗಲ | ಅನ್‌ಸ್ಟಾಪೆಬಲ್‌ ಎಂಬಾಪೆ!

ಜಗತ್ತನ್ನು ಮಂತ್ರಮುಗ್ಧಗೊಳಿಸಿದ ಫುಟ್‌ಬಾಲ್‌ ವಿಶ್ವಕಪ್‌ ಪಂದ್ಯಗಳು ಮುಗಿದಿವೆ. ಫುಟ್‌ಬಾಲ್‌ ಪ್ರೇಮಿಗಳು ಆಟದ ಪೌರುಷ, ಲಯ, ಮೋಡಿಗಳೆಲ್ಲವನ್ನೂ ಮನದೊಳಗೆ ಇಳಿಸಿಕೊಂಡಿದ್ದಾರೆ. ಅರ್ಜೆಂಟೀನಾ ಮತ್ತು ಫ್ರಾನ್ಸ್‌ ನಡುವಣ ಫೈನಲ್ ಪಂದ್ಯದ ರೋಚಕತೆಗೆ ಸಾಟಿಯೇ ಇಲ್ಲವೇನೋ. ಮೆಸ್ಸಿ ಎಂಬ ‍ಫುಟ್‌ಬಾಲ್‌ ಮಾಂತ್ರಿಕ ಅತಿಶ್ರೇಷ್ಠ ಆಟಗಾರರ ಸಾಲಲ್ಲಿ ಅಗ್ರಗಣ್ಯನೇ ಎಂಬ ಚರ್ಚೆಗೆ ಪಂದ್ಯವು ಅಂತ್ಯ ಹಾಡಿದೆ. ಇನ್ನು ಆ ಪ್ರಶ್ನೆಯನ್ನು ಯಾರೂ ಕೇಳಲಿಕ್ಕಿಲ್ಲ. ಹಾಗೆಯೇ ಫ್ರಾನ್ಸ್‌ನ ಎಂಬಾಪೆ ಎಂಬ ಆಟಗಾರ ಮಾಡಿದ ಮೋಡಿಯು ಇನ್ನೂ 23ರ ಹರೆಯದ ಅವರು ಫುಟ್‌ಬಾಲ್‌ ಅಂಗಣದಲ್ಲಿ ಏನೇನೆಲ್ಲ ಮಾಡಬಹುದು ಎಂಬ ನಿರೀಕ್ಷೆಯು ಮಡುಗಟ್ಟುವಂತೆ ಮಾಡಿದೆ. ಈ ಇಬ್ಬರ ಆಟ ಮತ್ತು ಬದುಕಿನತ್ತ ಒಂದು ಇಣುಕುನೋಟ ಇಲ್ಲಿದೆ:
Last Updated 19 ಡಿಸೆಂಬರ್ 2022, 22:30 IST
ಆಳ-ಅಗಲ | ಅನ್‌ಸ್ಟಾಪೆಬಲ್‌ ಎಂಬಾಪೆ!

ರಾಧೆ ಹೇಳಿಕೊಟ್ಟ ಕಲೆ ಸಾಂಝಿ!

ಯಮುನಾ ತೀರದ ಸುತ್ತಲಿನ ಪ್ರದೇಶಗಳಲ್ಲಿ ಮಾತ್ರ ಕಾಣಸಿಗುತ್ತಿದ್ದ ಸಾಂಝಿ ಕಲೆ ಈಗ ದೇಶ ಸಂಚಾರ ಹೊರಟಿದೆ. ಕೃಷ್ಣ–ರಾಧೆಯರ ಕಾಲದಷ್ಟು ಹಿಂದಿನ ಸುದೀರ್ಘ ಚರಿತ್ರೆ ನಮ್ಮ ಕಲೆಗಿದೆ ಎನ್ನುತ್ತಾರೆ ಸಾಂಝಿ ಕಲಾವಿದರು. ದಸ್ತಕರ್‌ ಸಂಸ್ಥೆಯ ವತಿಯಿಂದ ಈಚೆಗೆ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಮೇಳಕ್ಕೆ ಬಂದಿದ್ದ ಕಲಾವಿದ ಆಶುತೋಷ್‌ ವರ್ಮಾ ತೆರೆದಿಟ್ಟ ಸಾಂಝಿ ಜಗತ್ತು ಎಷ್ಟೊಂದು ಅದ್ಭುತ!
Last Updated 11 ಸೆಪ್ಟೆಂಬರ್ 2021, 19:30 IST
ರಾಧೆ ಹೇಳಿಕೊಟ್ಟ ಕಲೆ ಸಾಂಝಿ!

ಆಳ-ಅಗಲ: ಹಳ್ಳಿ ಆಸ್ಪತ್ರೆಗಳು ಹಾಸಿಗೆ ಹಿಡಿದಿವೆ ಸೋಮಿ...!

ಕೊರತೆಗಳ ಕಾಟ, ಅಪನಂಬಿಕೆಯ ಅಡೆತಡೆ... ಗ್ರಾಮೀಣ ಪ್ರದೇಶದ ಆರೋಗ್ಯ ಕೇಂದ್ರಗಳತ್ತ ಆಡಳಿತ ವ್ಯವಸ್ಥೆಯ ಅಸಡ್ಡೆ
Last Updated 7 ಜುಲೈ 2021, 2:04 IST
ಆಳ-ಅಗಲ: ಹಳ್ಳಿ ಆಸ್ಪತ್ರೆಗಳು ಹಾಸಿಗೆ ಹಿಡಿದಿವೆ ಸೋಮಿ...!

ಸೋಷಿಯಲ್‌ ಮೀಡಿಯಾ: ಪ್ರತಿಭಟನೆಯ ಹೊಸ ದುನಿಯಾ

ಭಾರತದ ರೈತರ ಪ್ರತಿಭಟನೆಗೆ ಶಕ್ತಿಯನ್ನು ತುಂಬಿದ್ದು, ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧದ ಹೋರಾಟವನ್ನು ಹಬ್ಬಿಸಿದ್ದು, ಬೆಲಾರಸ್‌ನಲ್ಲಿ ಜನ ಬೀದಿಗೆ ಇಳಿಯುವಂತೆ ಮಾಡಿದ್ದು, ಅಮೆರಿಕದಲ್ಲಿ ಕಪ್ಪು ವರ್ಣೀಯ ವ್ಯಕ್ತಿಯ ಕೊಲೆಯ ವಿರುದ್ಧ ಪ್ರತಿಭಟನೆಯ ಕಿಚ್ಚು ಹಚ್ಚಿದ್ದು, ಅರಬ್‌ ರಾಷ್ಟ್ರಗಳಲ್ಲಿ ಹಲವು ಭ್ರಷ್ಟ ಅಧ್ಯಕ್ಷರನ್ನು ಕಸದ ಬುಟ್ಟಿಗೆ ಎಸೆಯುವಂತಾದ ದಂಗೆಗೆ ಕಾರಣವಾಗಿದ್ದು – ಎಲ್ಲದರ ಹಿಂದಿನ ಶಕ್ತಿಯೂ ಈ ಸೋಶಿಯಲ್‌ ಮೀಡಿಯಾ. ಅಂದಹಾಗೆ, ಇದು ಜನಸಾಮಾನ್ಯರ ಪ್ರತಿಭಟನೆಯ ಸಾಧನವಾಗಿ ಮಾರ್ಪಟ್ಟಿರುವುದು ಹೇಗೆ ಗೊತ್ತೆ?
Last Updated 12 ಜೂನ್ 2021, 19:30 IST
ಸೋಷಿಯಲ್‌ ಮೀಡಿಯಾ: ಪ್ರತಿಭಟನೆಯ ಹೊಸ ದುನಿಯಾ

ತಾರಪಾ: ಎಲ್ಲಾದ್ರೂ ಕಂಡಿದ್ದೀರಾ ಇಂಥ ವಾದ್ಯ?!

ಹಳ್ಳಿಯ ಸುತ್ತಲಿನ ಕಾಡಿನಲ್ಲಿ ಸಿಗುವ ಸೋರೆಕಾಯಿ, ಬಿದಿರು, ತಾಳೆ ಮರದ ಎಲೆ ಹಾಗೂ ಜೇನುಗೂಡಿನ ಮೇಣ – ಇಷ್ಟೇ ಈ ವಾದ್ಯವನ್ನು ತಯಾರಿಸಲು ಬೇಕಾಗಿರುವ ಪರಿಕರಗಳು.
Last Updated 15 ಮೇ 2021, 19:30 IST
ತಾರಪಾ: ಎಲ್ಲಾದ್ರೂ ಕಂಡಿದ್ದೀರಾ ಇಂಥ ವಾದ್ಯ?!

ಒಳನೋಟ: ಆರ್ಥಿಕ ದಾರ್ಶನಿಕನ ಅರ್ಥವತ್ತಾದ ಬದುಕು

ಯಾಗಾ ವೇಣುಗೋಪಾಲ್‌ (ವೈ.ವಿ.) ರೆಡ್ಡಿ – ಭಾರತೀಯ ಅರ್ಥ ಜಗತ್ತಿನಲ್ಲಿ ಬಹುದೊಡ್ಡ ಹೆಸರು. ಕೇಂದ್ರ ಸರ್ಕಾರದ ವಿತ್ತ ಅಧಿಕಾರಿಯಾಗಿ, ಭಾರತೀಯ ರಿಸರ್ವ್‌ ಬ್ಯಾಂಕಿನ ಉಪ ಗವರ್ನರ್‌, ಗವರ್ನರ್‌ ಆಗಿ, 14ನೇ ಹಣಕಾಸು ಆಯೋಗದ ಅಧ್ಯಕ್ಷರಾಗಿ ದೇಶದ ಆರ್ಥಿಕ ನೀತಿಗಳ ನಿರೂಪಣೆಯಲ್ಲಿ ಅವರ ಪಾತ್ರ ಬಲು ಹಿರಿದು. ಜನಸಾಮಾನ್ಯರ ಒಳಿತನ್ನೇ ತಮ್ಮ ಧ್ಯೇಯವನ್ನಾಗಿ ಹೊಂದಿ ಕೆಲಸ ಮಾಡಿದವರು ಅವರು.
Last Updated 20 ಮಾರ್ಚ್ 2021, 19:30 IST
ಒಳನೋಟ: ಆರ್ಥಿಕ ದಾರ್ಶನಿಕನ ಅರ್ಥವತ್ತಾದ ಬದುಕು

ಹಾಲಿವುಡ್‌ನಲ್ಲೂ ಮಿಂಚಿದ ಹಾವಾಡಗಿತ್ತಿ!

ಹಾವುಗಳನ್ನು ಒಯ್ಯುತ್ತಿದ್ದ ಬುಟ್ಟಿಗಳ ಮಧ್ಯೆ ಊರಿಂದೂರಿಗೆ ಹೋಗುತ್ತಿದ್ದ ಆ ಪುಟ್ಟ ಬಾಲಕಿ, ಕಾಲ್‌ಬೆಲಿಯಾ ನೃತ್ಯದ ಐಕಾನ್‌ ಆಗಿ ಬೆಳೆದಿದ್ದು ಒಂದು ರೋಚಕ ಕಥೆ...
Last Updated 27 ಫೆಬ್ರುವರಿ 2021, 19:30 IST
ಹಾಲಿವುಡ್‌ನಲ್ಲೂ ಮಿಂಚಿದ ಹಾವಾಡಗಿತ್ತಿ!
ADVERTISEMENT
ADVERTISEMENT
ADVERTISEMENT
ADVERTISEMENT