ಬಜೆಟ್ ವಿಶ್ಲೇಷಣೆ: ಯೋಜನೆಗಳು ಆಕರ್ಷಕ: ಗುರಿ ತಲುಪುವತ್ತ ಇರಲಿ ಚಿತ್ತ
ವಾರ್ಷಿಕ ಬಜೆಟ್ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಕೇಂದ್ರ ಬಜೆಟ್ ಎಲ್ಲರಿಗೂ
ಪ್ರಯೋಜನಕಾರಿಯಾಗಲಿದೆ, ವಿಶೇಷವಾಗಿ ಮಹಿಳೆಯರು, ಯುವಕರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ರೈತರ ಮೇಲೆ ಕೇಂದ್ರೀಕರಿಸುತ್ತದೆ ಎಂದು ಹೇಳಿದ್ದಾರೆ. ಅಂತರ್ಗತ ಬೆಳವಣಿಗೆಯು ಈ ಬಜೆಟ್ನ ಪ್ರಮುಖ ಅಂಶವಾಗಿದೆ. ಕೃಷಿ ವೇಗವರ್ಧಕಗಳು ಮತ್ತು ಮಹಿಳೆಯರಿಗೆ ಸ್ವಸಹಾಯ ಗುಂಪುಗಳ (ಎಸ್ಎಚ್ಜಿ) ಮೂಲಕ ಸಿಗುವ ಬೆಂಬಲವು ಗ್ರಾಮೀಣ ಯುನಿಕಾರ್ನ್
ಗಳನ್ನು ಹುಟ್ಟುಹಾಕಿ ಬೆಳೆಸಲು ಸಹಾಯ ಮಾಡುತ್ತದೆ ಹಾಗೂ ಉದ್ಯಮಶೀಲತೆಯನ್ನು ಉತ್ತೇಜಿಸುತ್ತದೆ. ಆರ್ಥಿಕ ಸ್ಥಿರತೆ, ತಂತ್ರಜ್ಞಾನ ಚಾಲಿತ ಬೆಳವಣಿಗೆ ಮತ್ತು ಉದ್ಯೋಗದ ಮೇಲೆ ಸರ್ಕಾರವು ಹೆಚ್ಚಿನ ಗಮನ ಹೊಂದಿದೆ ಎಂಬುದಕ್ಕೆ ಇದು ಸೂಚನೆಯಾಗಿದೆ.Last Updated 1 ಫೆಬ್ರುವರಿ 2023, 19:30 IST