ಸವಿತಾ ಎನ್. ಕುಮಾರ್
ಬೆಂಗಳೂರು ವಿಶ್ವವಿದ್ಯಾಲಯದ ಬಿ.ಆರ್ಕ್ ಪದವಿಧರೆ, ‘ಆಕಾರ‘ ಎಂಬ ಹೆಸರಿನಲ್ಲಿ ಖಾಸಗಿ ಮತ್ತು ಸರ್ಕಾರಿ ವಲಯಗಳ ವೈವಿಧ್ಯಮಯ ವಾಸ್ತುಶಿಲ್ಪ ಯೋಜನೆಗಳಲ್ಲಿ ಮೂರು ದಶಕಗಳ ವೃತ್ತಿ ಅನುಭವ. ವಾಸ್ತುಶಿಲ್ಪ, ವಾಸ್ತು ಶಾಸ್ತ್ರ ಮತ್ತು ಜ್ಯೋತಿಷ್ಯ; ಈ ಮೂರೂ ಅಂಶಗಳನ್ನೊಳಗೊಂಡ ‘ಅದೃಶ್ಯ ತ್ರಿಕೋನ‘ದ ಆಧಾರದಲ್ಲಿ ವಿಭಿನ್ನ ಯೋಜನೆಗಳನ್ನು ತಯಾರಿಸುವಲ್ಲಿ ಖ್ಯಾತಿ. ಇದರೊಂದಿಗೆ ಸೌಂದರ್ಯಶಾಸ್ತ್ರ, ತಂತ್ರಜ್ಞಾನ ಮತ್ತು ದೃಷ್ಟಿಕೋನವನ್ನೂ ಅಳವಡಿಸುವುದು ಇವರ ಹೆಗ್ಗಳಿಕೆ.