ಬಾಲಕ ಮತ್ತು ಬಾಲಕಿ ತಲೆಮರೆಸಿರುವ ಪ್ರಕರಣವೊಂದಕ್ಕೆ ಸಂಬಂಧಿಸಿ ಎರಡು ಕುಟುಂಬಗಳ ನಡುವಣ ವ್ಯಾಜ್ಯ ಬಗೆಹರಿಸಲು ಮಾರ್ಚ್ 9ರಂದು ಶಾಸಕರು ಸಂಧಾನ ಸಭೆ ನಡೆಸಿದ್ದರು. ಆ ಸಂದರ್ಭ ಬಾಲಕನ ತಾಯಿ ಮತ್ತು ಇಬ್ಬರು ಮಕ್ಕಳ ಮೇಲೆ ಶಾಸಕರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಕುರಿತು ಬಾಲಕನ ತಂದೆ ಮಾಡಿರುವ ಆರೋಪದ ಆಧಾರದಲ್ಲಿ ರುದ್ರಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.