ಹೆಚ್ಚುವರಿ ಬಂಡವಾಳ ಹೂಡುವ ಮೂಲಕ ಕಾರ್ಖಾನೆಯ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಬೇಕು. ಈ ಕಾರ್ಖಾನೆಗೆ ಅಗತ್ಯವಿರುವ ಉತ್ಕೃಷ್ಟ ಅದಿರನ್ನು ಪೂರೈಸಲು ಬಳ್ಳಾರಿ ಜಿಲ್ಲೆಯಲ್ಲಿನ ಗಣಿಯನ್ನು ಹಂಚಿಕೆ ಮಾಡಲಾಗಿದೆ. ಅಗತ್ಯ ನೀರು, ಭೂಮಿ ಮತ್ತು
ವಿದ್ಯುತ್ ಸೌಲಭ್ಯ ಒಳಗೊಂಡಿರುವ ಕಾರ್ಖಾನೆಗೆ ಸಮರ್ಪಕವಾದ ಬಂಡವಾಳ ಒದಗಿಸಿ ಪುನಶ್ಚೇತನಕ್ಕೆ
ಮುಂದಾಗಬೇಕು ಎಂದು ಅವರು ಕೋರಿದರು. ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಈ ಸಂದರ್ಭ ಹಾಜರಿದ್ದರು.