<p><strong>ನವದಹಲಿ</strong>: ಬಜೆಟ್ ಭಾಷಣದುದ್ದಕ್ಕೂ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಾಯಿಯಿಂದ ನಿರುದ್ಯೋಗ ಮತ್ತು ಹಣದುಬ್ಬರ ಎಂದ ಪದಗಳನ್ನೇ ಕೇಳಿಲ್ಲ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.</p><p>ಸುದ್ದಿಸಂಸ್ಥೆ ಪಿಟಿಐ ಜೊತೆಗೆ ಮಾತನಾಡಿದ ತರೂರ್, ‘ಬಿಹಾರ ಮತ್ತು ದೆಹಲಿ ಮತದಾರರನ್ನು ಕೇಂದ್ರೀಕರಿಸಿದ ಬಜೆಟ್ ಇದಾಗಿದ್ದು, ದೂರದೃಷ್ಟಿಯಿಂದ ಕೂಡಿಲ್ಲ ಎಂದು ಹೇಳಿದ್ದಾರೆ.</p><p>‘ಬಿಹಾರಕ್ಕೆ ಹೆಚ್ಚಿನ ಯೋಜನೆಗಳನ್ನು ಘೋಷಿಸಿರುವುದರಿಂದ ನಿಮಗೆ(ಬಿಜೆಪಿಗೆ) ಹೆಚ್ಚು ವೋಟ್ ಸಿಗಬಹುದು. ಆದರೆ, ಇಂತಹ ಅಲ್ಪಾವಧಿಯ ಚಿಂತನೆಗಳು ಈಗ ಬೇಕಿಲ್ಲ. ಮುಳುಗುತ್ತಿರುವ ವ್ಯವಸ್ಥೆಯಿಂದ ದೇಶವನ್ನು ಹೊರತರಲು ಹೆಚ್ಚು ದೂರದೃಷ್ಟಿಯುಳ್ಳ ಯೋಜನೆಗಳು ಬೇಕಿವೆ’ ಎಂದು ಹೇಳಿದ್ದಾರೆ.</p><p>‘ಒಂದು ದೇಶ, ಒಂದು ಚುನಾವಣೆ’ಗೆ ಬಗ್ಗೆ ಮಾತನಾಡುವ ಪಕ್ಷ, ದೆಹಲಿ ಮತ್ತು ಬಿಹಾರದ ಮತದಾರರನ್ನು ಕೇಂದ್ರೀಕರಿಸಿ ಬಜೆಟ್ ಮಂಡಿಸಿದೆ. ‘ಈ ಸಮಯದಲ್ಲಿ ಚುನಾವಣೆ ಬಂದಿದ್ದರೆ ನಮಗೂ ಹೆಚ್ಚಿನ ಕೊಡುಗೆಗಳು ಸಿಗುತ್ತಿತ್ತು’ ಎಂದು ಆಂಧ್ರಪ್ರದೇಶದ ಜನರು ಯೋಚಿಸುತ್ತಿರಬಹುದು ಎಂದಿದ್ದಾರೆ.</p><p>ಹೊಸ ತೆರಿಗೆ ಪದ್ಧತಿ ಅನ್ವಯ 12 ಲಕ್ಷದವೆರೆಗೆ ತೆರಿಗೆ ವಿನಾಯಿತಿ ಕೊಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನೀವು ಉದ್ಯೋಗಿಯಾಗಿದ್ದು, 12 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಗಳಿಸುತ್ತಿದ್ದರೆ ಇದರಿಂದ ನಿಮಗೆ ಸಂತೋಷವಾಗುತ್ತದೆ. ನಿಮಗೆ ಉದ್ಯೋಗವಿಲ್ಲದಿದ್ದರೆ, ಉದ್ಯೋಗ ಎಲ್ಲಿಂದ ಬರಲಿದೆ ಎಂಬುವುದನ್ನು ಈ ಬಜೆಟ್ ಸ್ಪಷ್ಟಪಡಿಸಿಲ್ಲ’ ಎಂದಿದ್ದಾರೆ.</p><p>‘ಆರ್ಥಿಕತೆ ಎದುರಿಸುತ್ತಿರುವ ಪ್ರಮುಖ ಸವಾಲುಗಳು ಯಾವುವು? ನಮ್ಮ ದೇಶದಲ್ಲಿ ನಿರುದ್ಯೋಗ ಅತಿದೊಡ್ಡ ಸಮಸ್ಯೆಯಾಗಿದೆ. ಉದ್ಯೋಗವಿಲ್ಲದ ಯುವಕರ ಸಂಖ್ಯೆ ದಾಖಲೆ ಮಟ್ಟಕ್ಕೆ ಏರಿದೆ. ಆದರೆ, ಈ ಬಗ್ಗೆ ಬಜೆಟ್ನಲ್ಲಿ ಸ್ಪಷ್ಟಪಡಿಸಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದಹಲಿ</strong>: ಬಜೆಟ್ ಭಾಷಣದುದ್ದಕ್ಕೂ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಾಯಿಯಿಂದ ನಿರುದ್ಯೋಗ ಮತ್ತು ಹಣದುಬ್ಬರ ಎಂದ ಪದಗಳನ್ನೇ ಕೇಳಿಲ್ಲ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.</p><p>ಸುದ್ದಿಸಂಸ್ಥೆ ಪಿಟಿಐ ಜೊತೆಗೆ ಮಾತನಾಡಿದ ತರೂರ್, ‘ಬಿಹಾರ ಮತ್ತು ದೆಹಲಿ ಮತದಾರರನ್ನು ಕೇಂದ್ರೀಕರಿಸಿದ ಬಜೆಟ್ ಇದಾಗಿದ್ದು, ದೂರದೃಷ್ಟಿಯಿಂದ ಕೂಡಿಲ್ಲ ಎಂದು ಹೇಳಿದ್ದಾರೆ.</p><p>‘ಬಿಹಾರಕ್ಕೆ ಹೆಚ್ಚಿನ ಯೋಜನೆಗಳನ್ನು ಘೋಷಿಸಿರುವುದರಿಂದ ನಿಮಗೆ(ಬಿಜೆಪಿಗೆ) ಹೆಚ್ಚು ವೋಟ್ ಸಿಗಬಹುದು. ಆದರೆ, ಇಂತಹ ಅಲ್ಪಾವಧಿಯ ಚಿಂತನೆಗಳು ಈಗ ಬೇಕಿಲ್ಲ. ಮುಳುಗುತ್ತಿರುವ ವ್ಯವಸ್ಥೆಯಿಂದ ದೇಶವನ್ನು ಹೊರತರಲು ಹೆಚ್ಚು ದೂರದೃಷ್ಟಿಯುಳ್ಳ ಯೋಜನೆಗಳು ಬೇಕಿವೆ’ ಎಂದು ಹೇಳಿದ್ದಾರೆ.</p><p>‘ಒಂದು ದೇಶ, ಒಂದು ಚುನಾವಣೆ’ಗೆ ಬಗ್ಗೆ ಮಾತನಾಡುವ ಪಕ್ಷ, ದೆಹಲಿ ಮತ್ತು ಬಿಹಾರದ ಮತದಾರರನ್ನು ಕೇಂದ್ರೀಕರಿಸಿ ಬಜೆಟ್ ಮಂಡಿಸಿದೆ. ‘ಈ ಸಮಯದಲ್ಲಿ ಚುನಾವಣೆ ಬಂದಿದ್ದರೆ ನಮಗೂ ಹೆಚ್ಚಿನ ಕೊಡುಗೆಗಳು ಸಿಗುತ್ತಿತ್ತು’ ಎಂದು ಆಂಧ್ರಪ್ರದೇಶದ ಜನರು ಯೋಚಿಸುತ್ತಿರಬಹುದು ಎಂದಿದ್ದಾರೆ.</p><p>ಹೊಸ ತೆರಿಗೆ ಪದ್ಧತಿ ಅನ್ವಯ 12 ಲಕ್ಷದವೆರೆಗೆ ತೆರಿಗೆ ವಿನಾಯಿತಿ ಕೊಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನೀವು ಉದ್ಯೋಗಿಯಾಗಿದ್ದು, 12 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಗಳಿಸುತ್ತಿದ್ದರೆ ಇದರಿಂದ ನಿಮಗೆ ಸಂತೋಷವಾಗುತ್ತದೆ. ನಿಮಗೆ ಉದ್ಯೋಗವಿಲ್ಲದಿದ್ದರೆ, ಉದ್ಯೋಗ ಎಲ್ಲಿಂದ ಬರಲಿದೆ ಎಂಬುವುದನ್ನು ಈ ಬಜೆಟ್ ಸ್ಪಷ್ಟಪಡಿಸಿಲ್ಲ’ ಎಂದಿದ್ದಾರೆ.</p><p>‘ಆರ್ಥಿಕತೆ ಎದುರಿಸುತ್ತಿರುವ ಪ್ರಮುಖ ಸವಾಲುಗಳು ಯಾವುವು? ನಮ್ಮ ದೇಶದಲ್ಲಿ ನಿರುದ್ಯೋಗ ಅತಿದೊಡ್ಡ ಸಮಸ್ಯೆಯಾಗಿದೆ. ಉದ್ಯೋಗವಿಲ್ಲದ ಯುವಕರ ಸಂಖ್ಯೆ ದಾಖಲೆ ಮಟ್ಟಕ್ಕೆ ಏರಿದೆ. ಆದರೆ, ಈ ಬಗ್ಗೆ ಬಜೆಟ್ನಲ್ಲಿ ಸ್ಪಷ್ಟಪಡಿಸಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>