<p><strong>ಬೆಂಗಳೂರು:</strong> ಖಾಸಗಿ ವಲಯದ ಬಂಧನ್ ಬ್ಯಾಂಕ್ ತನ್ನ ಸ್ಟ್ಯಾಂಡರ್ಡ್ ಉಳಿತಾಯ ಖಾತೆಗಳಲ್ಲಿ ತಿಂಗಳೊಂದರಲ್ಲಿ ಕಾಯ್ದುಕೊಳ್ಳಬೇಕಾದ ಸರಾಸರಿ ಮೊತ್ತವನ್ನು (ಎಂಎಬಿ) ತಗ್ಗಿಸುತ್ತಿರುವುದಾಗಿ ಹೇಳಿದೆ.</p>.<p>ಆದರೆ ಎಂಎಬಿ ಮೊತ್ತ ತಗ್ಗಿದ್ದರೂ ಖಾತೆಯ ಜೊತೆ ಸಿಗುವ ವೈಶಿಷ್ಟ್ಯಗಳು ಮೊದಲಿನಂತೆಯೇ ಮುಂದುವರಿಯಲಿವೆ ಎಂದು ಬ್ಯಾಂಕ್ನ ಪ್ರಕಟಣೆ ತಿಳಿಸಿದೆ. ಸ್ಟ್ಯಾಂಡರ್ಡ್ ಉಳಿತಾಯ ಖಾತೆಗಳಿಗೆ ಅನ್ವಯವಾಗುವ ಎಂಎಬಿ ಮೊತ್ತ ₹5,000 ಇದ್ದಿದ್ದು ಫೆಬ್ರುವರಿ 1ರಿಂದ ಅನ್ವಯವಾಗುವಂತೆ ₹2,000ಕ್ಕೆ ಇಳಿಕೆ ಆಗಲಿದೆ.</p>.<p>‘ದೇಶದಾದ್ಯಂತ ಇರುವ ಬ್ಯಾಂಕ್ನ ಲಕ್ಷಾಂತರ ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆಗಳು ಇನ್ನಷ್ಟು ಕೈಗೆಟಕುವಂತೆ ಆಗಲಿ, ಹೆಚ್ಚು ಸುಲಭವಾಗಿ ಅವರಿಗೆ ಸೇವೆಗಳು ಲಭ್ಯವಾಗಲಿ ಎಂಬ ಅಪೇಕ್ಷೆಯೊಂದಿಗೆ ಈ ಬದಲಾವಣೆ ತರಲಾಗಿದೆ. ಅದರಲ್ಲೂ ಮುಖ್ಯವಾಗಿ ಅರೆನಗರ ಹಾಗೂ ಗ್ರಾಮೀಣ ಪ್ರದೇಶಗಳ ಜನರನ್ನು ಗಮನದಲ್ಲಿ ಇರಿಸಿಕೊಂಡು ಹೀಗೆ ಮಾಡಲಾಗಿದೆ’ ಎಂದು ಪ್ರಕಟಣೆ ತಿಳಿಸಿದೆ. </p>.<p>‘ಎಂಎಬಿ ಅಗತ್ಯವನ್ನು ಕಡಿಮೆ ಮಾಡುವ ಮೂಲಕ ನಾವು ಬ್ಯಾಂಕಿಂಗ್ ಸೇವೆಗಳು ಹೆಚ್ಚು ಕೈಗೆಟಕುವಂತೆ ಮಾಡುತ್ತಿದ್ದೇವೆ’ ಎಂದು ಬ್ಯಾಂಕ್ನ ಇ.ಡಿ. ಹಾಗೂ ಸಿ.ಬಿ.ಒ ರಾಜಿಂದರ್ ಕುಮಾರ್ ಬಬ್ಬರ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಖಾಸಗಿ ವಲಯದ ಬಂಧನ್ ಬ್ಯಾಂಕ್ ತನ್ನ ಸ್ಟ್ಯಾಂಡರ್ಡ್ ಉಳಿತಾಯ ಖಾತೆಗಳಲ್ಲಿ ತಿಂಗಳೊಂದರಲ್ಲಿ ಕಾಯ್ದುಕೊಳ್ಳಬೇಕಾದ ಸರಾಸರಿ ಮೊತ್ತವನ್ನು (ಎಂಎಬಿ) ತಗ್ಗಿಸುತ್ತಿರುವುದಾಗಿ ಹೇಳಿದೆ.</p>.<p>ಆದರೆ ಎಂಎಬಿ ಮೊತ್ತ ತಗ್ಗಿದ್ದರೂ ಖಾತೆಯ ಜೊತೆ ಸಿಗುವ ವೈಶಿಷ್ಟ್ಯಗಳು ಮೊದಲಿನಂತೆಯೇ ಮುಂದುವರಿಯಲಿವೆ ಎಂದು ಬ್ಯಾಂಕ್ನ ಪ್ರಕಟಣೆ ತಿಳಿಸಿದೆ. ಸ್ಟ್ಯಾಂಡರ್ಡ್ ಉಳಿತಾಯ ಖಾತೆಗಳಿಗೆ ಅನ್ವಯವಾಗುವ ಎಂಎಬಿ ಮೊತ್ತ ₹5,000 ಇದ್ದಿದ್ದು ಫೆಬ್ರುವರಿ 1ರಿಂದ ಅನ್ವಯವಾಗುವಂತೆ ₹2,000ಕ್ಕೆ ಇಳಿಕೆ ಆಗಲಿದೆ.</p>.<p>‘ದೇಶದಾದ್ಯಂತ ಇರುವ ಬ್ಯಾಂಕ್ನ ಲಕ್ಷಾಂತರ ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆಗಳು ಇನ್ನಷ್ಟು ಕೈಗೆಟಕುವಂತೆ ಆಗಲಿ, ಹೆಚ್ಚು ಸುಲಭವಾಗಿ ಅವರಿಗೆ ಸೇವೆಗಳು ಲಭ್ಯವಾಗಲಿ ಎಂಬ ಅಪೇಕ್ಷೆಯೊಂದಿಗೆ ಈ ಬದಲಾವಣೆ ತರಲಾಗಿದೆ. ಅದರಲ್ಲೂ ಮುಖ್ಯವಾಗಿ ಅರೆನಗರ ಹಾಗೂ ಗ್ರಾಮೀಣ ಪ್ರದೇಶಗಳ ಜನರನ್ನು ಗಮನದಲ್ಲಿ ಇರಿಸಿಕೊಂಡು ಹೀಗೆ ಮಾಡಲಾಗಿದೆ’ ಎಂದು ಪ್ರಕಟಣೆ ತಿಳಿಸಿದೆ. </p>.<p>‘ಎಂಎಬಿ ಅಗತ್ಯವನ್ನು ಕಡಿಮೆ ಮಾಡುವ ಮೂಲಕ ನಾವು ಬ್ಯಾಂಕಿಂಗ್ ಸೇವೆಗಳು ಹೆಚ್ಚು ಕೈಗೆಟಕುವಂತೆ ಮಾಡುತ್ತಿದ್ದೇವೆ’ ಎಂದು ಬ್ಯಾಂಕ್ನ ಇ.ಡಿ. ಹಾಗೂ ಸಿ.ಬಿ.ಒ ರಾಜಿಂದರ್ ಕುಮಾರ್ ಬಬ್ಬರ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>