ವಿಮೆ ಉತ್ಪನ್ನಗಳ ಬಗ್ಗೆ ತಪ್ಪು ಮಾಹಿತಿ ನೀಡುವುದು, ಸೂಕ್ತವಲ್ಲದ ಉತ್ಪನ್ನ ಮಾರಾಟ ಮಾಡುವುದು, ವಿಮೆ ಕಂಪನಿಗಳ ಉದ್ಯೋಗಿಗಳೆಂದು ಹೇಳಿಕೊಂಡು ಗರಿಷ್ಠ ಪ್ರತಿಫಲದ ಆಸೆ ತೋರಿಸಿ ವಂಚನೆ ಎಸಗುವವರ ವಿರುದ್ಧ ಜನಜಾಗೃತಿಗೆ ಸಂಸ್ಥೆ ಕ್ರಮ ಕೈಗೊಂಡಿದೆ. ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ಶಿಬಿರ ಮತ್ತು ಕಾರ್ಯಕ್ರಮಗಳನ್ನು ದೇಶದಾದ್ಯಂತ ಇರುವ ಸಂಸ್ಥೆಯ ಶಾಖೆಗಳಲ್ಲಿ ಆಯೋಜಿಸುತ್ತಿದೆ.