ಕುಟುಂಬದವರು ಧರ್ಮಸ್ಥಳದಲ್ಲಿ ಜಯರಾಮ್ ಅವರೊಂದಿಗೆ ಗಾಂಧರ್ವ ವಿವಾಹ ಮಾಡಿಸಿದ್ದರು. ಏಪ್ರಿಲ್ ತಿಂಗಳಿನಲ್ಲಿ ಕೊಪ್ಪಕ್ಕೆ ಹೋದಾಗ ಅಕ್ಕ ತಿಮ್ಮಕ್ಕ ಮನೆಯೊಳಗೆ ಬಿಟ್ಟುಕೊಳ್ಳದೆ, ಹೊಡೆದು ಹೊರ ಹಾಕಿದ್ದಾರೆ. ವಂಚನೆ ಮಾಡಿರುವ ಜಯರಾಮ್ ಮತ್ತು ಹಲ್ಲೆ ಮಾಡಿರುವ ಅಕ್ಕ ತಿಮ್ಮಕ್ಕ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಕೋರಿದ್ದಾರೆ. ಆರೋಪಿ ಜಯರಾಮ್ ಅವರನ್ನು ಬಂಧಿಸಿ ಕೋರ್ಟ್ಗೆ ಹಾಜರುಪಡಿಸಲಾಗಿದೆ. ಆರೋಪಿ ತಿಮ್ಮಕ್ಕ ತಲೆಮರೆಸಿಕೊಂಡಿದ್ದಾರೆ.