ನವದೆಹಲಿ: 1993ರ ಮುಂಬೈ ಸ್ಫೋಟ ಪ್ರಕರಣದ ಸೂತ್ರದಾರ ದಾವೂದ್ ಇಬ್ರಾಹಿಂ ವಿರುದ್ಧ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಈಚೆಗೆ ದಾಖಲಿಸಿಕೊಂಡಿದ್ದ ಎಫ್ಐಆರ್ ಆಧರಿಸಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಮಂಗಳವಾರ ಮುಂಬೈನ ವಿವಿಧೆಡೆ ಶೋಧ ಕಾರ್ಯ ನಡೆಸಿದ್ದಾರೆ.
ಭೂಗತಲೋಕದ ಕಾರ್ಯಾಚರಣೆ, ಅಕ್ರಮ ಆಸ್ತಿ, ಹವಾಲ ವಹಿವಾಟಿಗಾಗಿ ನಡೆದಿರುವ ಹಣ ಅಕ್ರಮ ವರ್ಗಾ ವಣೆಯ ತನಿಖೆಯ ಸಂಬಂಧ ಶೋಧ ನಡೆದಿದೆ ಎಂದು ಇ.ಡಿ ತಿಳಿಸಿದೆ.