‘ರಷ್ಯಾ ಮತ್ತು ಉಕ್ರೇನ್ ಯುದ್ಧದ ಕಾರಣದಿಂದಾಗಿ ಸೂರ್ಯಕಾಂತಿ ಎಣ್ಣೆ ಬೆಲೆ ಹೆಚ್ಚಾಗಿದೆ. ಈಗ ತಾಳೆ ಎಣ್ಣೆ ರಫ್ತು ನಿಷೇಧದ ಕಾರಣದಿಂದಾಗಿ ಕೆಲವು ದಿನಗಳ ಮಟ್ಟಿಗೆ ಒಂದಿಷ್ಟು ಸಮಸ್ಯೆಯಾಗುವುದು ಖಂಡಿತ. ಆದರೆ, ತಾಳೆ ಎಣ್ಣೆ ರಫ್ತಿನಿಂದ ದೊಡ್ಡ ಆದಾಯ ಪಡೆಯುತ್ತಿರುವ ಇಂಡೊನೇಷ್ಯಾ, ಈ ನಿಷೇಧವನ್ನು ಹೆಚ್ಚು ದಿನ ಜಾರಿಯಲ್ಲಿ ಇರಿಸಿಕೊಳ್ಳಲಿಕ್ಕಿಲ್ಲ’ ಎಂದು ಬೆಂಗಳೂರಿನ ಕೃಷ್ಣಂ ಆಯಿಲ್ ಟ್ರೇಡರ್ಸ್ನ ವರ್ತಕ ಕೃಷ್ಣಂ ಶಶಿಧರ್ ಅಭಿಪ್ರಾಯಪಟ್ಟರು.