<p><strong>ಮುಂಬೈ</strong>: ಬೈಜುಸ್ ಬಹಿರಂಗಪಡಿಸಿರುವ ಹಣಕಾಸಿನ ಮಾಹಿತಿಗಳಲ್ಲಿ ಕಂಪನಿಯ ಲೆಕ್ಕ ಪರಿಶೋಧಕರು ತೀವ್ರ ನಿರ್ಲಕ್ಷ್ಯ ಎಸಗಿರುವುದು ಕಂಡುಬಂದಿದೆ ಎಂದು ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆ (ಐಸಿಎಐ) ತಿಳಿಸಿದೆ. </p>.<p>ಕೆಲವು ನಿರ್ದಿಷ್ಟ ಹಣಕಾಸು ವರ್ಷಗಳಿಗೆ ಸಂಬಂಧಿಸಿದಂತೆ ಬೈಜುಸ್ ನೀಡಿರುವ ಮಾಹಿತಿ ಬಗ್ಗೆ ಐಸಿಎಐ ಪರಿಶೀಲನೆ ನಡೆಸಿದ್ದು, ಲೆಕ್ಕ ಪರಿಶೋಧಕರ ನಿರ್ಲಕ್ಷ್ಯವು ಬೆಳಕಿಗೆ ಬಂದಿದೆ ಎಂದು ಐಸಿಎಐ ಅಧ್ಯಕ್ಷ ರಂಜೀತ್ ಕುಮಾರ್ ಅಗರ್ವಾಲ್ ಅವರು, ಬುಧವಾರ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.</p>.<p>ಹಣಕಾಸು ವರದಿ ಪರಿಶೀಲನಾ ಮಂಡಳಿ (ಎಫ್ಆರ್ಆರ್ಬಿ) ಕೂಡ ಪರಿಶೀಲನೆ ನಡೆಸುತ್ತಿದೆ. ಬೈಜುಸ್ ಲೆಕ್ಕ ಪರಿಶೋಧಕರ ವಿರುದ್ಧ ದಂಡಾರ್ಹ ಕ್ರಮಕೈಗೊಳ್ಳುವಂತೆ ಮಂಡಳಿಗೆ ಶಿಫಾರಸು ಮಾಡಲಾಗುವುದು ಎಂದು ಹೇಳಿದ್ದಾರೆ.</p>.<p>‘ಅಲ್ಲದೆ, ಲೆಕ್ಕ ಪರಿಶೋಧಕರು ಪೇಟಿಎಂಗೆ ಹೆಚ್ಚಿನ ಪಾವತಿ ಮಾಡಿದ್ದಾರೆ. ಈ ಬಗ್ಗೆಯೂ ಪರಿಶೀಲನೆ ನಡೆಸಲು ಸ್ವಯಂಪ್ರೇರಿತವಾಗಿ ನಿರ್ಧರಿಸಲಾಗಿದೆ’ ಎಂದು ಹೇಳಿದ್ದಾರೆ.</p>.<p>‘ನಾವು ಸಲ್ಲಿಸುವ ವರದಿ ಬಗ್ಗೆ ಎಫ್ಆರ್ಆರ್ಬಿಯಿಂದ ವೈಯಕ್ತಿಕ ಹಾಗೂ ಗುಂಪು ಹಂತದಲ್ಲಿ ಮೂರು ಹಂತಗಳಲ್ಲಿ ಪರಾಮರ್ಶೆ ನಡೆಯಲಿದೆ. ಆ ನಂತರ ಲೆಕ್ಕ ಪರಿಶೋಧಕರ ಪಾತ್ರದ ಬಗ್ಗೆ ನಿರ್ದಿಷ್ಟ ಕ್ರಮಕೈಗೊಳ್ಳಲಿದೆ. ಬಳಿಕ ನಾವು ನೀಡಿರುವ ವರದಿಯು ಸಾರ್ವಜನಿಕರಿಗೆ ಲಭ್ಯವಾಗಲಿದೆ’ ಎಂದು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ</strong>: ಬೈಜುಸ್ ಬಹಿರಂಗಪಡಿಸಿರುವ ಹಣಕಾಸಿನ ಮಾಹಿತಿಗಳಲ್ಲಿ ಕಂಪನಿಯ ಲೆಕ್ಕ ಪರಿಶೋಧಕರು ತೀವ್ರ ನಿರ್ಲಕ್ಷ್ಯ ಎಸಗಿರುವುದು ಕಂಡುಬಂದಿದೆ ಎಂದು ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆ (ಐಸಿಎಐ) ತಿಳಿಸಿದೆ. </p>.<p>ಕೆಲವು ನಿರ್ದಿಷ್ಟ ಹಣಕಾಸು ವರ್ಷಗಳಿಗೆ ಸಂಬಂಧಿಸಿದಂತೆ ಬೈಜುಸ್ ನೀಡಿರುವ ಮಾಹಿತಿ ಬಗ್ಗೆ ಐಸಿಎಐ ಪರಿಶೀಲನೆ ನಡೆಸಿದ್ದು, ಲೆಕ್ಕ ಪರಿಶೋಧಕರ ನಿರ್ಲಕ್ಷ್ಯವು ಬೆಳಕಿಗೆ ಬಂದಿದೆ ಎಂದು ಐಸಿಎಐ ಅಧ್ಯಕ್ಷ ರಂಜೀತ್ ಕುಮಾರ್ ಅಗರ್ವಾಲ್ ಅವರು, ಬುಧವಾರ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.</p>.<p>ಹಣಕಾಸು ವರದಿ ಪರಿಶೀಲನಾ ಮಂಡಳಿ (ಎಫ್ಆರ್ಆರ್ಬಿ) ಕೂಡ ಪರಿಶೀಲನೆ ನಡೆಸುತ್ತಿದೆ. ಬೈಜುಸ್ ಲೆಕ್ಕ ಪರಿಶೋಧಕರ ವಿರುದ್ಧ ದಂಡಾರ್ಹ ಕ್ರಮಕೈಗೊಳ್ಳುವಂತೆ ಮಂಡಳಿಗೆ ಶಿಫಾರಸು ಮಾಡಲಾಗುವುದು ಎಂದು ಹೇಳಿದ್ದಾರೆ.</p>.<p>‘ಅಲ್ಲದೆ, ಲೆಕ್ಕ ಪರಿಶೋಧಕರು ಪೇಟಿಎಂಗೆ ಹೆಚ್ಚಿನ ಪಾವತಿ ಮಾಡಿದ್ದಾರೆ. ಈ ಬಗ್ಗೆಯೂ ಪರಿಶೀಲನೆ ನಡೆಸಲು ಸ್ವಯಂಪ್ರೇರಿತವಾಗಿ ನಿರ್ಧರಿಸಲಾಗಿದೆ’ ಎಂದು ಹೇಳಿದ್ದಾರೆ.</p>.<p>‘ನಾವು ಸಲ್ಲಿಸುವ ವರದಿ ಬಗ್ಗೆ ಎಫ್ಆರ್ಆರ್ಬಿಯಿಂದ ವೈಯಕ್ತಿಕ ಹಾಗೂ ಗುಂಪು ಹಂತದಲ್ಲಿ ಮೂರು ಹಂತಗಳಲ್ಲಿ ಪರಾಮರ್ಶೆ ನಡೆಯಲಿದೆ. ಆ ನಂತರ ಲೆಕ್ಕ ಪರಿಶೋಧಕರ ಪಾತ್ರದ ಬಗ್ಗೆ ನಿರ್ದಿಷ್ಟ ಕ್ರಮಕೈಗೊಳ್ಳಲಿದೆ. ಬಳಿಕ ನಾವು ನೀಡಿರುವ ವರದಿಯು ಸಾರ್ವಜನಿಕರಿಗೆ ಲಭ್ಯವಾಗಲಿದೆ’ ಎಂದು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>