<p><strong>ಕೋಲ್ಕತ್ತ</strong>: ದೇಶದ ಒಳನಾಡು ಜಲಮಾರ್ಗಗಳಲ್ಲಿ ಸರಕು ಸಾಗಣೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಭಾನುವಾರ ‘ಜಲವಾಹಕ’ ಯೋಜನೆಗೆ ಚಾಲನೆ ನೀಡಿದೆ.</p>.<p>ರಾಷ್ಟ್ರೀಯ ಜಲಮಾರ್ಗಗಳಾದ ಗಂಗಾ, ಬ್ರಹ್ಮಪುತ್ರ ಹಾಗೂ ಬಾರಕ್ ನದಿ ವ್ಯಾಪ್ತಿಯಲ್ಲಿ ಸುಸ್ಥಿರ ಹಾಗೂ ಕಡಿಮೆ ಖರ್ಚಿನಲ್ಲಿ ಹಡಗುಗಳ ಮೂಲಕ ಸರಕು ಸಾಗಣೆಗೆ ಪ್ರೋತ್ಸಾಹ ನೀಡುವುದು ಇದರ ಉದ್ದೇಶವಾಗಿದೆ. </p>.<p>ಮೂರು ಸರಕು ಸಾಗಣೆ ಹಡಗುಗಳ ಸಂಚಾರಕ್ಕೆ ಚಾಲನೆ ನೀಡಿದ ಕೇಂದ್ರ ಹಡಗು, ಬಂದರು ಮತ್ತು ಜಲಮಾರ್ಗ ಸಚಿವ ಸರ್ಬಾನಂದ ಸೋನೊವಾಲ್ ಮಾತನಾಡಿ, ‘ಸಾಗಣೆ ವೆಚ್ಚ ತಗ್ಗಿಸುವ ಜೊತೆಗೆ ರಸ್ತೆ ಮತ್ತು ರೈಲು ಸಾಗಣೆಯಲ್ಲಿನ ದಟ್ಟಣೆ ಕಡಿಮೆ ಮಾಡುವುದೇ ಈ ಯೋಜನೆ ಗುರಿಯಾಗಿದೆ’ ಎಂದರು.</p>.<p>ಈ ಜಲಮಾರ್ಗದಲ್ಲಿ 300 ಕಿ.ಮೀ.ಗೂ ಹೆಚ್ಚು ದೂರದವರೆಗೆ ಸರಕುಗಳ ಸಾಗಣೆ ಕಾರ್ಯಾಚರಣೆಯ ಒಟ್ಟು ವೆಚ್ಚದ ಪೈಕಿ ಶೇ 30ರಷ್ಟು ಹಣವನ್ನು ಯೋಜನೆಯಡಿ ಸರ್ಕಾರವೇ ಭರಿಸಲಿದೆ. ಯೋಜನೆಯು ಮೂರು ವರ್ಷಗಳ ವರೆಗೆ ಜಾರಿಯಲ್ಲಿ ಇರಲಿದೆ ಎಂದು ತಿಳಿಸಿದರು.</p>.<p>ಭಾರತದ ಒಳನಾಡು ಜಲಮಾರ್ಗಗಳ ಪ್ರಾಧಿಕಾರ (ಐಡಬ್ಲ್ಯುಎಐ), ಒಳನಾಡು ಮತ್ತು ಕರಾವಳಿ ಶಿಪ್ಪಿಂಗ್ ಕಂಪನಿಯಿಂದ ಜಂಟಿಯಾಗಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ.</p>.<p>ಕೋಲ್ಕತ್ತ–ಪಟ್ನಾ–ವಾರಾಣಸಿ ಮತ್ತು ಕೋಲ್ಕತ್ತ–ಪಾಂಡು (ಗುವಾಹಟಿ) ಮಾರ್ಗದಲ್ಲಿ ಹಡಗುಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. </p>.<p>ಭಾರತದಲ್ಲಿ ಒಳನಾಡು ಜಲಮಾರ್ಗದ ವ್ಯಾಪ್ತಿಯು 20,236 ಕಿ.ಮೀ.ನಷ್ಟಿದೆ. ಅಮೆರಿಕ ಮತ್ತು ಚೀನಾಕ್ಕೆ ಹೋಲಿಸಿದರೆ ಈ ಮಾರ್ಗದ ಬಳಕೆಯು ಕಡಿಮೆಯಿದೆ.</p>.<p>ಅಲ್ಟ್ರಾಟೆಕ್ ಸಿಮೆಂಟ್ ಒಳನಾಡು ಜಲಮಾರ್ಗ ಬಳಸಿದ ಮೊದಲ ಸಿಮೆಂಟ್ ಕಂಪನಿ ಎಂಬ ಹೆಗ್ಗಳಿಕೆಗ ಪಡೆದಿದೆ. 2023ರಲ್ಲಿ ಈ ಕಂಪನಿಯು ಒಡಿಶಾದ ಪರದೀಪ್ ಬಂದರಿನಿಂದ ಗುಜರಾತ್ನ ಅಮ್ರೇಲಿಯಲ್ಲಿ ಇರುವ ತನ್ನ ಸಿಮೆಂಟ್ ತಯಾರಿಕಾ ಘಟಕಕ್ಕೆ ಫಾಸ್ಫೋಜಿಪ್ಸಂ ಸಾಗಿಸಲು ಜಲಮಾರ್ಗ ಬಳಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲ್ಕತ್ತ</strong>: ದೇಶದ ಒಳನಾಡು ಜಲಮಾರ್ಗಗಳಲ್ಲಿ ಸರಕು ಸಾಗಣೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಭಾನುವಾರ ‘ಜಲವಾಹಕ’ ಯೋಜನೆಗೆ ಚಾಲನೆ ನೀಡಿದೆ.</p>.<p>ರಾಷ್ಟ್ರೀಯ ಜಲಮಾರ್ಗಗಳಾದ ಗಂಗಾ, ಬ್ರಹ್ಮಪುತ್ರ ಹಾಗೂ ಬಾರಕ್ ನದಿ ವ್ಯಾಪ್ತಿಯಲ್ಲಿ ಸುಸ್ಥಿರ ಹಾಗೂ ಕಡಿಮೆ ಖರ್ಚಿನಲ್ಲಿ ಹಡಗುಗಳ ಮೂಲಕ ಸರಕು ಸಾಗಣೆಗೆ ಪ್ರೋತ್ಸಾಹ ನೀಡುವುದು ಇದರ ಉದ್ದೇಶವಾಗಿದೆ. </p>.<p>ಮೂರು ಸರಕು ಸಾಗಣೆ ಹಡಗುಗಳ ಸಂಚಾರಕ್ಕೆ ಚಾಲನೆ ನೀಡಿದ ಕೇಂದ್ರ ಹಡಗು, ಬಂದರು ಮತ್ತು ಜಲಮಾರ್ಗ ಸಚಿವ ಸರ್ಬಾನಂದ ಸೋನೊವಾಲ್ ಮಾತನಾಡಿ, ‘ಸಾಗಣೆ ವೆಚ್ಚ ತಗ್ಗಿಸುವ ಜೊತೆಗೆ ರಸ್ತೆ ಮತ್ತು ರೈಲು ಸಾಗಣೆಯಲ್ಲಿನ ದಟ್ಟಣೆ ಕಡಿಮೆ ಮಾಡುವುದೇ ಈ ಯೋಜನೆ ಗುರಿಯಾಗಿದೆ’ ಎಂದರು.</p>.<p>ಈ ಜಲಮಾರ್ಗದಲ್ಲಿ 300 ಕಿ.ಮೀ.ಗೂ ಹೆಚ್ಚು ದೂರದವರೆಗೆ ಸರಕುಗಳ ಸಾಗಣೆ ಕಾರ್ಯಾಚರಣೆಯ ಒಟ್ಟು ವೆಚ್ಚದ ಪೈಕಿ ಶೇ 30ರಷ್ಟು ಹಣವನ್ನು ಯೋಜನೆಯಡಿ ಸರ್ಕಾರವೇ ಭರಿಸಲಿದೆ. ಯೋಜನೆಯು ಮೂರು ವರ್ಷಗಳ ವರೆಗೆ ಜಾರಿಯಲ್ಲಿ ಇರಲಿದೆ ಎಂದು ತಿಳಿಸಿದರು.</p>.<p>ಭಾರತದ ಒಳನಾಡು ಜಲಮಾರ್ಗಗಳ ಪ್ರಾಧಿಕಾರ (ಐಡಬ್ಲ್ಯುಎಐ), ಒಳನಾಡು ಮತ್ತು ಕರಾವಳಿ ಶಿಪ್ಪಿಂಗ್ ಕಂಪನಿಯಿಂದ ಜಂಟಿಯಾಗಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ.</p>.<p>ಕೋಲ್ಕತ್ತ–ಪಟ್ನಾ–ವಾರಾಣಸಿ ಮತ್ತು ಕೋಲ್ಕತ್ತ–ಪಾಂಡು (ಗುವಾಹಟಿ) ಮಾರ್ಗದಲ್ಲಿ ಹಡಗುಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. </p>.<p>ಭಾರತದಲ್ಲಿ ಒಳನಾಡು ಜಲಮಾರ್ಗದ ವ್ಯಾಪ್ತಿಯು 20,236 ಕಿ.ಮೀ.ನಷ್ಟಿದೆ. ಅಮೆರಿಕ ಮತ್ತು ಚೀನಾಕ್ಕೆ ಹೋಲಿಸಿದರೆ ಈ ಮಾರ್ಗದ ಬಳಕೆಯು ಕಡಿಮೆಯಿದೆ.</p>.<p>ಅಲ್ಟ್ರಾಟೆಕ್ ಸಿಮೆಂಟ್ ಒಳನಾಡು ಜಲಮಾರ್ಗ ಬಳಸಿದ ಮೊದಲ ಸಿಮೆಂಟ್ ಕಂಪನಿ ಎಂಬ ಹೆಗ್ಗಳಿಕೆಗ ಪಡೆದಿದೆ. 2023ರಲ್ಲಿ ಈ ಕಂಪನಿಯು ಒಡಿಶಾದ ಪರದೀಪ್ ಬಂದರಿನಿಂದ ಗುಜರಾತ್ನ ಅಮ್ರೇಲಿಯಲ್ಲಿ ಇರುವ ತನ್ನ ಸಿಮೆಂಟ್ ತಯಾರಿಕಾ ಘಟಕಕ್ಕೆ ಫಾಸ್ಫೋಜಿಪ್ಸಂ ಸಾಗಿಸಲು ಜಲಮಾರ್ಗ ಬಳಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>