ಈ ಬಗ್ಗೆ ಮಾಹಿತಿ ನೀಡಿದ ಕೊಂಡ್ಲಹಳ್ಳಿ ಮಹೇಂದ್ರ ಆಯಿಲ್ ಇಂಡಸ್ಟ್ರೀಸ್ ಮಾಲೀಕ ಎಂ.ಇ. ಮಂಜುನಾಥ್, ‘ನಾನು ವ್ಯಾಪಾರ ಆರಂಭಿಸಿದ ನಂತರ ಈ ವರ್ಷದಷ್ಟು ಕಳಪೆ ಗುಣಮಟ್ಟದ ಇಳುವರಿ ಕಂಡಿರಲಿಲ್ಲ. ಸಾಮಾನ್ಯವಾಗಿ ಪ್ರತಿ 100 ಗ್ರಾಂ ಕಾಯಿಗೆ ಶೇ 73ರಿಂದ ಶೇ75ರಷ್ಟು ಗ್ರಾಂ ಬೀಜ ಲಭ್ಯವಾಗುತ್ತಿತ್ತು. ಆದರೆ, ಈ ವರ್ಷ ಶೇ 55ರಿಂದ ಶೇ 65 ಗ್ರಾಂ ಬೀಜ ಸಿಗುತ್ತಿದೆ. ಇದರಲ್ಲಿ ಗುಣಮಟ್ಟದ ಎಣ್ಣೆ ತೆಗೆಯಲು ಸಾಧ್ಯವಿಲ್ಲ. ಸಣ್ಣ ಪುಟ್ಟ ಹೋಟೆಲ್ಗಳಿಗೆ ಹಾಗೂ ತಿನ್ನಲು ಮಾತ್ರ ಖರೀದಿಸಬಹುದು. ಈ ಕಾರಣಕ್ಕಾಗಿಯೇ ಅನೇಕ ಡಿಕಾಟಿಕೇಟರ್ ಮಾಲೀಕರು ಈ ವರ್ಷ ಬಾಗಿಲು ಮುಚ್ಚಿದ್ದಾರೆ’ ಎಂದು ಹೇಳಿದರು.