ಜಿಎಸ್ಟಿ ವ್ಯವಸ್ಥೆಯಡಿ ಇದೇ ಮೊದಲ ಬಾರಿಗೆ ಲಾಭಕೋರತನ ತಡೆ ವ್ಯವಸ್ಥೆ ಜಾರಿಗೆ ತರಲಾಗಿದೆ. ಆದರೆ, ಜಿಎಸ್ಟಿಯಡಿ ಲಭ್ಯವಾಗುವ ಪ್ರಯೋಜನಗಳನ್ನು ಲೆಕ್ಕಹಾಕುವುದನ್ನು ಸ್ಪಷ್ಟಪಡಿಸಿಲ್ಲ. ಇದು ಗೊಂದಲಕ್ಕೆ ಆಸ್ಪದ ಮಾಡಿಕೊಟ್ಟು ವ್ಯಾಜ್ಯಗಳಿಗೆ ಕಾರಣವಾಗುತ್ತಿದೆ. ಇದು ವಹಿವಾಟನ್ನು ಸರಳಗೊಳಿಸುವುದನ್ನು ಉತ್ತೇಜಿಸುವ ತತ್ವಕ್ಕೆ ವಿರುದ್ಧವಾಗಿದೆ. ಬೆಲೆ ಕಡಿತದ ಪ್ರಮಾಣ ಲೆಕ್ಕ ಹಾಕುವ ಮತ್ತು ನಿರ್ದಿಷ್ಟ ಮಾನದಂಡ ಅನುಸರಿಸುವ ಬಗ್ಗೆ ಸ್ಪಷ್ಟ ಮಾರ್ಗದರ್ಶಿ ಸೂತ್ರಗಳ ಅಗತ್ಯ ಇದೆ ಎಂದು ‘ಸಿಐಐ’ ಅಭಿಪ್ರಾಯಪಟ್ಟಿದೆ.