<p><strong>ಬೆಂಗಳೂರು:</strong> ಕಿರು ಹಣಕಾಸು ಕ್ಷೇತ್ರದ ಬಲವರ್ಧನೆ ಮತ್ತು ಸಾಲ ಪಡೆದ ಗ್ರಾಹಕರ ರಕ್ಷಣೆ ಸೇರಿ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ಆರ್ಬಿಐ ಸ್ವಯಂ ನಿಯಂತ್ರಣ ಒಕ್ಕೂಟವು (ಎಸ್ಆರ್ಒ) ಸಹಾಯವಾಣಿ ಆರಂಭಿಸಿದೆ.</p>.<p>ಸಾಲ ವಸೂಲಾತಿ ಸಮಸ್ಯೆ, ಸಾಲಗಾರರು ಎದುರಿಸುತ್ತಿರುವ ಒತ್ತಡ ಮತ್ತು ಇನ್ನಿತರ ಸನ್ನಿವೇಶಗಳ ಹಿನ್ನಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ), ಸಣ್ಣ ಹಣಕಾಸು ಕ್ಷೇತ್ರದಲ್ಲಿ ಸ್ವಯಂ ನಿಯಂತ್ರಣ ಒಕ್ಕೂಟ ಸ್ಥಾಪಿಸಿದೆ. ಇದರ ಒಕ್ಕೂಟದ ರಾಷ್ಟ್ರೀಯ ಸಭೆ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆಯಿತು. ಈ ವೇಳೆ ಸಹಾಯವಾಣಿ ಪ್ರಾರಂಭಕ್ಕೆ ಚಾಲನೆ ನೀಡಿದೆ.</p>.<p>ಗ್ರಾಹಕರು 1800–121–1322 ಸಹಾಯವಾಣಿಗೆ ಕರೆ ಮಾಡಬಹುದಾಗಿದೆ. ಸಹಾಯವಾಣಿಯು ಪ್ರಸ್ತುತ ಹಿಂದಿ ಮತ್ತು ಇಂಗ್ಲಿಷ್ನಲ್ಲಿದ್ದು, ಶೀಘ್ರದಲ್ಲೇ ಹತ್ತು ಪ್ರಾದೇಶಿಕ ಭಾಷೆಗಳಿಗೆ ವಿಸ್ತರಿಸಲಾಗುತ್ತಿದೆ. ಇದೇ ವೇಳೆ ಗ್ರಾಹಕರ ದೂರು ಪರಿಹಾರ ವ್ಯವಸ್ಥೆಯ (ಸಿಜಿಆರ್ಎಂ) ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು.</p>.<p>ಸಭೆಯಲ್ಲಿ ಕರ್ನಾಟಕದಲ್ಲಿ ಇತ್ತೀಚೆಗೆ ಕೈಗೊಂಡ, ಜಾರಿಗೊಳಿಸಲಾದ ನೀತಿ ನಿಯಮಗಳೂ ಸೇರಿದಂತೆ ಕಿರು ಹಣಕಾಸು ಕ್ಷೇತ್ರ ಎದುರಿಸುತ್ತಿರುವ ಸವಾಲುಗಳ ಚರ್ಚೆ ನಡೆಯಿತು. ಸಭೆಯಲ್ಲಿ ಕ್ಷೇತ್ರಕ್ಕೆ ಸಂಬಂಧಿಸಿದ ತಜ್ಞರು, ಪಾಲುದಾರರು ಮತ್ತು ವಿವಿಧ ಕಿರು ಹಣಕಾಸು ಕಂಪನಿಗಳ ಮುಖ್ಯಸ್ಥರು ಭಾಗವಹಿಸಿದ್ದರು.</p>.<p>‘ದೇಶದ ಒಟ್ಟು ಸಾಲ ವ್ಯವಸ್ಥೆಯಲ್ಲಿ ಕಿರು ಹಣಕಾಸು ನೆರವಿನ ಪಾಲು ಕೇವಲ ಶೇಕಡ ಮೂರರಷ್ಟಿದ್ದರೂ ಅದು ಬೀರುವ ಪರಿಣಾಮ ಅಗಾಧ. ಹಾಗಾಗಿ ಗ್ರಾಹಕರ ಅಗತ್ಯತೆಗಳನ್ನು ಅರ್ಥ ಮಾಡಿಕೊಂಡು, ತಂತ್ರಜ್ಞಾನ ಪರಿಹಾರಗಳನ್ನು ಬಳಸಿಕೊಂಡು ಮಾನವ ಸ್ಪರ್ಶವನ್ನು ಸಾಲ ವಿತರಣೆಯಲ್ಲಿ ಅನುಸರಿಸಬೇಕು’ ಎಂದು ಸಾ-ಧನ್ನ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಸಿಇಒ ಜಿ.ಜಿ. ಮಾಮ್ಮೆನ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕಿರು ಹಣಕಾಸು ಕ್ಷೇತ್ರದ ಬಲವರ್ಧನೆ ಮತ್ತು ಸಾಲ ಪಡೆದ ಗ್ರಾಹಕರ ರಕ್ಷಣೆ ಸೇರಿ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ಆರ್ಬಿಐ ಸ್ವಯಂ ನಿಯಂತ್ರಣ ಒಕ್ಕೂಟವು (ಎಸ್ಆರ್ಒ) ಸಹಾಯವಾಣಿ ಆರಂಭಿಸಿದೆ.</p>.<p>ಸಾಲ ವಸೂಲಾತಿ ಸಮಸ್ಯೆ, ಸಾಲಗಾರರು ಎದುರಿಸುತ್ತಿರುವ ಒತ್ತಡ ಮತ್ತು ಇನ್ನಿತರ ಸನ್ನಿವೇಶಗಳ ಹಿನ್ನಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ), ಸಣ್ಣ ಹಣಕಾಸು ಕ್ಷೇತ್ರದಲ್ಲಿ ಸ್ವಯಂ ನಿಯಂತ್ರಣ ಒಕ್ಕೂಟ ಸ್ಥಾಪಿಸಿದೆ. ಇದರ ಒಕ್ಕೂಟದ ರಾಷ್ಟ್ರೀಯ ಸಭೆ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆಯಿತು. ಈ ವೇಳೆ ಸಹಾಯವಾಣಿ ಪ್ರಾರಂಭಕ್ಕೆ ಚಾಲನೆ ನೀಡಿದೆ.</p>.<p>ಗ್ರಾಹಕರು 1800–121–1322 ಸಹಾಯವಾಣಿಗೆ ಕರೆ ಮಾಡಬಹುದಾಗಿದೆ. ಸಹಾಯವಾಣಿಯು ಪ್ರಸ್ತುತ ಹಿಂದಿ ಮತ್ತು ಇಂಗ್ಲಿಷ್ನಲ್ಲಿದ್ದು, ಶೀಘ್ರದಲ್ಲೇ ಹತ್ತು ಪ್ರಾದೇಶಿಕ ಭಾಷೆಗಳಿಗೆ ವಿಸ್ತರಿಸಲಾಗುತ್ತಿದೆ. ಇದೇ ವೇಳೆ ಗ್ರಾಹಕರ ದೂರು ಪರಿಹಾರ ವ್ಯವಸ್ಥೆಯ (ಸಿಜಿಆರ್ಎಂ) ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು.</p>.<p>ಸಭೆಯಲ್ಲಿ ಕರ್ನಾಟಕದಲ್ಲಿ ಇತ್ತೀಚೆಗೆ ಕೈಗೊಂಡ, ಜಾರಿಗೊಳಿಸಲಾದ ನೀತಿ ನಿಯಮಗಳೂ ಸೇರಿದಂತೆ ಕಿರು ಹಣಕಾಸು ಕ್ಷೇತ್ರ ಎದುರಿಸುತ್ತಿರುವ ಸವಾಲುಗಳ ಚರ್ಚೆ ನಡೆಯಿತು. ಸಭೆಯಲ್ಲಿ ಕ್ಷೇತ್ರಕ್ಕೆ ಸಂಬಂಧಿಸಿದ ತಜ್ಞರು, ಪಾಲುದಾರರು ಮತ್ತು ವಿವಿಧ ಕಿರು ಹಣಕಾಸು ಕಂಪನಿಗಳ ಮುಖ್ಯಸ್ಥರು ಭಾಗವಹಿಸಿದ್ದರು.</p>.<p>‘ದೇಶದ ಒಟ್ಟು ಸಾಲ ವ್ಯವಸ್ಥೆಯಲ್ಲಿ ಕಿರು ಹಣಕಾಸು ನೆರವಿನ ಪಾಲು ಕೇವಲ ಶೇಕಡ ಮೂರರಷ್ಟಿದ್ದರೂ ಅದು ಬೀರುವ ಪರಿಣಾಮ ಅಗಾಧ. ಹಾಗಾಗಿ ಗ್ರಾಹಕರ ಅಗತ್ಯತೆಗಳನ್ನು ಅರ್ಥ ಮಾಡಿಕೊಂಡು, ತಂತ್ರಜ್ಞಾನ ಪರಿಹಾರಗಳನ್ನು ಬಳಸಿಕೊಂಡು ಮಾನವ ಸ್ಪರ್ಶವನ್ನು ಸಾಲ ವಿತರಣೆಯಲ್ಲಿ ಅನುಸರಿಸಬೇಕು’ ಎಂದು ಸಾ-ಧನ್ನ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಸಿಇಒ ಜಿ.ಜಿ. ಮಾಮ್ಮೆನ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>