<p><strong>ಮುಂಬೈ</strong>: ‘ಬೈಜುಸ್ ಕಂಪನಿಯು ಬಹಿರಂಗಪಡಿಸಿರುವ ಹಣಕಾಸಿನ ಮಾಹಿತಿಗಳಲ್ಲಿ ಸಮಸ್ಯೆ ಇರುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆಯ (ಐಸಿಎಐ) ಅಧ್ಯಕ್ಷ ದೆಬಶಿಶ್ ಮಿತ್ರಾ ಹೇಳಿದ್ದಾರೆ.</p>.<p>‘ಕಂಪನಿಯಲ್ಲಿ ಯವುದೇ ಗಂಭೀರವಾದ ಲೋಪ ಆಗಿರುವಂತೆ ಕಾಣುತ್ತಿಲ್ಲ. ಆದರೆ, ಕಂಪನಿಯು ಬಹಿರಂಗಪಡಿಸಿರುವ ಹಣಕಾಸು ವಿವರಗಳಲ್ಲಿ ಸಮಸ್ಯೆ ಇರುವಂತೆ ಕಂಡುಬರುತ್ತಿದೆ. ಹಣಕಾಸು ವರದಿ ಪರಿಶೀಲನಾ ಮಂಡಳಿಯು (ಎಫ್ಆರ್ಆರ್ಬಿ) ಆ ಕುರಿತು ಪರಿಶೀಲನೆ ನಡೆಸುತ್ತಿದೆ’ ಎಂದು ಅವರು ತಿಳಿಸಿದ್ದಾರೆ.</p>.<p>ಲೋಕಸಭಾ ಸದಸ್ಯ ಕಾರ್ತಿ ಚಿದಂಬರಂ ಅವರು ಕಂಪನಿಯ ಹಣಕಾಸಿನ ವಿವರಗಳ ಬಗ್ಗೆ ಆತಂಕ ವ್ಯಕ್ತಪಡಿಸಿ ಕಳೆದ ತಿಂಗಳು ಐಸಿಎಐಗೆ ಪತ್ರ ಬರೆದಿದ್ದರು. ಕಂಪನಿಯ ಹಣಕಾಸು ವಿವರಗಳನ್ನು ಪರಿಶೀಲನೆ ನಡೆಸುವಂತೆ ಪತ್ರದಲ್ಲಿ ತಿಳಿಸಿದ್ದರು.</p>.<p>‘ಕಾರ್ತಿ ಅವರು ಪತ್ರ ಬರೆದಿದ್ದಾರೆ ಎನ್ನುವ ಕಾರಣಕ್ಕಷ್ಟೇ ಪರಶೀಲನೆ ನಡೆಸುತ್ತಿಲ್ಲ. ಬೈಜುಸ್ನ ಸಮಸ್ಯೆಗಳ ಅರಿವು ಸಂಸ್ಥೆಗೆ ಇದೆ’ ಎಂದೂ ಮಿತ್ರಾ ಸ್ಪಷ್ಟಪಡಿಸಿದ್ದಾರೆ. 2021ರ ಮಾರ್ಚ್ಗೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಬೈಜುಸ್ ₹ 4,588 ಕೋಟಿ ನಷ್ಟ ಅನುಭವಿಸಿದೆ. ವರಮಾನವು ₹ 2,428 ಕೋಟಿ ಆಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ</strong>: ‘ಬೈಜುಸ್ ಕಂಪನಿಯು ಬಹಿರಂಗಪಡಿಸಿರುವ ಹಣಕಾಸಿನ ಮಾಹಿತಿಗಳಲ್ಲಿ ಸಮಸ್ಯೆ ಇರುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆಯ (ಐಸಿಎಐ) ಅಧ್ಯಕ್ಷ ದೆಬಶಿಶ್ ಮಿತ್ರಾ ಹೇಳಿದ್ದಾರೆ.</p>.<p>‘ಕಂಪನಿಯಲ್ಲಿ ಯವುದೇ ಗಂಭೀರವಾದ ಲೋಪ ಆಗಿರುವಂತೆ ಕಾಣುತ್ತಿಲ್ಲ. ಆದರೆ, ಕಂಪನಿಯು ಬಹಿರಂಗಪಡಿಸಿರುವ ಹಣಕಾಸು ವಿವರಗಳಲ್ಲಿ ಸಮಸ್ಯೆ ಇರುವಂತೆ ಕಂಡುಬರುತ್ತಿದೆ. ಹಣಕಾಸು ವರದಿ ಪರಿಶೀಲನಾ ಮಂಡಳಿಯು (ಎಫ್ಆರ್ಆರ್ಬಿ) ಆ ಕುರಿತು ಪರಿಶೀಲನೆ ನಡೆಸುತ್ತಿದೆ’ ಎಂದು ಅವರು ತಿಳಿಸಿದ್ದಾರೆ.</p>.<p>ಲೋಕಸಭಾ ಸದಸ್ಯ ಕಾರ್ತಿ ಚಿದಂಬರಂ ಅವರು ಕಂಪನಿಯ ಹಣಕಾಸಿನ ವಿವರಗಳ ಬಗ್ಗೆ ಆತಂಕ ವ್ಯಕ್ತಪಡಿಸಿ ಕಳೆದ ತಿಂಗಳು ಐಸಿಎಐಗೆ ಪತ್ರ ಬರೆದಿದ್ದರು. ಕಂಪನಿಯ ಹಣಕಾಸು ವಿವರಗಳನ್ನು ಪರಿಶೀಲನೆ ನಡೆಸುವಂತೆ ಪತ್ರದಲ್ಲಿ ತಿಳಿಸಿದ್ದರು.</p>.<p>‘ಕಾರ್ತಿ ಅವರು ಪತ್ರ ಬರೆದಿದ್ದಾರೆ ಎನ್ನುವ ಕಾರಣಕ್ಕಷ್ಟೇ ಪರಶೀಲನೆ ನಡೆಸುತ್ತಿಲ್ಲ. ಬೈಜುಸ್ನ ಸಮಸ್ಯೆಗಳ ಅರಿವು ಸಂಸ್ಥೆಗೆ ಇದೆ’ ಎಂದೂ ಮಿತ್ರಾ ಸ್ಪಷ್ಟಪಡಿಸಿದ್ದಾರೆ. 2021ರ ಮಾರ್ಚ್ಗೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಬೈಜುಸ್ ₹ 4,588 ಕೋಟಿ ನಷ್ಟ ಅನುಭವಿಸಿದೆ. ವರಮಾನವು ₹ 2,428 ಕೋಟಿ ಆಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>