<p><strong>ನವದೆಹಲಿ</strong>: ಆಡಳಿತ ಮಂಡಳಿಯು ಕಚೇರಿಯಲ್ಲಿ ಬಲವಂತವಾಗಿ ಹೇರಿರುವ ಕ್ರಮಗಳನ್ನು ವಾಪಸ್ ಪಡೆಯುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇಂಡಿಯನ್ ಓವರ್ಸೀಸ್ ಬ್ಯಾಂಕ್ನ ಅಧಿಕಾರಿಗಳ ಸಂಘವು (ಐಒಬಿಒಎ) ಮಾರ್ಚ್ 2ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. </p>.<p>ಆಡಳಿತ ಮಂಡಳಿಯು ಕಚೇರಿಯ ಕೆಲಸದ ಸಮಯ ಮುಗಿದ ಬಳಿಕವೂ ಸಿಬ್ಬಂದಿಯಿಂದ ಕೆಲಸ ಮಾಡಿಸಿಕೊಳ್ಳುತ್ತಿರುವುದು, ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿರುವುದು ಆತಂಕಕಾರಿಯಾಗಿದೆ ಎಂದು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (ಎಐಬಿಒಸಿ) ಹೇಳಿದ್ದು, ಮುಷ್ಕರಕ್ಕೆ ಬೆಂಬಲ ನೀಡಿದೆ.</p>.<p>ಈ ಮುಷ್ಕರದ ಭಾಗವಾಗಿ ಬ್ಯಾಂಕ್ನ ಪ್ರಾದೇಶಿಕ ಕೇಂದ್ರಗಳ ಬಳಿ ಫೆಬ್ರುವರಿ 23ರಂದು ಪ್ರತಿಭಟನೆ ಮತ್ತು 26ರಂದು ಧರಣಿ ನಡೆಸಲಾಗುವುದು ಎಂದು ಐಒಬಿಒಎ ತಿಳಿಸಿದೆ. </p>.<p>ಕಚೇರಿಗಳಲ್ಲಿ ನ್ಯಾಯಬದ್ಧವಾದ ಕೆಲಸದ ಅವಧಿ ಜಾರಿಗೊಳಿಸಬೇಕು. ಪಾರದರ್ಶಕ ಆಡಳಿತವನ್ನು ಜಾರಿಗೊಳಿಸಬೇಕು, ಬ್ಯಾಂಕ್ನಲ್ಲಿ ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದೆ. </p>
<p><strong>ನವದೆಹಲಿ</strong>: ಆಡಳಿತ ಮಂಡಳಿಯು ಕಚೇರಿಯಲ್ಲಿ ಬಲವಂತವಾಗಿ ಹೇರಿರುವ ಕ್ರಮಗಳನ್ನು ವಾಪಸ್ ಪಡೆಯುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇಂಡಿಯನ್ ಓವರ್ಸೀಸ್ ಬ್ಯಾಂಕ್ನ ಅಧಿಕಾರಿಗಳ ಸಂಘವು (ಐಒಬಿಒಎ) ಮಾರ್ಚ್ 2ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. </p>.<p>ಆಡಳಿತ ಮಂಡಳಿಯು ಕಚೇರಿಯ ಕೆಲಸದ ಸಮಯ ಮುಗಿದ ಬಳಿಕವೂ ಸಿಬ್ಬಂದಿಯಿಂದ ಕೆಲಸ ಮಾಡಿಸಿಕೊಳ್ಳುತ್ತಿರುವುದು, ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿರುವುದು ಆತಂಕಕಾರಿಯಾಗಿದೆ ಎಂದು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (ಎಐಬಿಒಸಿ) ಹೇಳಿದ್ದು, ಮುಷ್ಕರಕ್ಕೆ ಬೆಂಬಲ ನೀಡಿದೆ.</p>.<p>ಈ ಮುಷ್ಕರದ ಭಾಗವಾಗಿ ಬ್ಯಾಂಕ್ನ ಪ್ರಾದೇಶಿಕ ಕೇಂದ್ರಗಳ ಬಳಿ ಫೆಬ್ರುವರಿ 23ರಂದು ಪ್ರತಿಭಟನೆ ಮತ್ತು 26ರಂದು ಧರಣಿ ನಡೆಸಲಾಗುವುದು ಎಂದು ಐಒಬಿಒಎ ತಿಳಿಸಿದೆ. </p>.<p>ಕಚೇರಿಗಳಲ್ಲಿ ನ್ಯಾಯಬದ್ಧವಾದ ಕೆಲಸದ ಅವಧಿ ಜಾರಿಗೊಳಿಸಬೇಕು. ಪಾರದರ್ಶಕ ಆಡಳಿತವನ್ನು ಜಾರಿಗೊಳಿಸಬೇಕು, ಬ್ಯಾಂಕ್ನಲ್ಲಿ ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದೆ. </p>