ಮಂಗಳೂರು: ‘ಕರ್ಣಾಟಕ ಬ್ಯಾಂಕ್, ವಿಜಯ ಬ್ಯಾಂಕ್, ಕೆನರಾ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್ ಹಾಗೂ ಸಿಂಡಿಕೇಟ್ ಬ್ಯಾಂಕ್ ಹುಟ್ಡಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ. ಇವುಗಳಲ್ಲಿ ಕೆಲವು ಬೇರೆ ಬ್ಯಾಂಕ್ಗಳ ಜೊತೆ ವಿಲೀನವಾಗಿವೆ. ಕರ್ಣಾಟಕ ಬ್ಯಾಂಕ್ ಬೇರೆ ಬ್ಯಾಂಕ್ಗಳನ್ನು ತನ್ನ ತೆಕ್ಕೆಗೆ ಪಡೆದು ಬಲಿಷ್ಠವಾಗಿ ಬೆಳೆದು, ರಾಜ್ಯದ ಸ್ವಾಭಿಮಾನ ಕಾಪಾಡುವ ಬ್ಯಾಂಕ್ ಆಗಿ ಹೊರಹೊಮ್ಮಬೇಕು’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.