ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಗ್ರಾಮೀಣ ಬ್ಯಾಂಕ್ | ₹ 50 ಸಾವಿರ ಕೋಟಿ‌ ದಾಟಿದ ವ್ಯವಹಾರ

Last Updated 21 ಜೂನ್ 2020, 13:17 IST
ಅಕ್ಷರ ಗಾತ್ರ

ಬಳ್ಳಾರಿ: ‘ಕರ್ನಾಟಕ ಗ್ರಾಮೀಣ ಬ್ಯಾಂಕ್ ಮಾರ್ಚ್ ಅಂತ್ಯಕ್ಕೆ ₹ 50,220 ಕೋಟಿ ವಹಿವಾಟು ನಡೆಸಿದೆ’ ಎಂದು ಬ್ಯಾಂಕ್ ಅಧ್ಯಕ್ಷ ಶ್ರೀನಾಥ್ ಜೋಷಿ ತಿಳಿಸಿದ್ದಾರೆ.

‘ದೇಶದ 46 ಪ್ರಾದೇಶಿಕ‌ ಗ್ರಾಮೀಣ ಬ್ಯಾಂಕ್‌ಗಳ ಪೈಕಿ ಈ ಸಾಧನೆ ಮಾಡಿದ ಏಕೈಕ ಬ್ಯಾಂಕ್ ಎಂಬ ಕೀರ್ತಿಯೂ ನಮ್ಮದಾಗಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

‘ಬ್ಯಾಂಕ್ ₹28,435 ಕೋಟಿ ಠೇವಣಿ ಸಂಗ್ರಹ ಮಾಡಿದ್ದು, ದೇಶದಲ್ಲಿ ಎರಡನೇ ಸ್ಥಾನಪಡೆದಿದೆ. ₹21,785 ಕೋಟಿ ಸಾಲ ನೀಡಿದ್ದು, ಮೊದಲ ಸ್ಥಾನ ಪಡೆದಿದೆ.2019-20ನೇ ಸಾಲಿನಲ್ಲಿ ಬ್ಯಾಂಕ್ 45,795 ರೈತರಿಗೆ ₹521 ಕೋಟಿ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಲ್ಲಿ ಸಾಲ ನೀಡಿದೆ. ಆದ್ಯತೆ ವಲಯದಲ್ಲಿ ₹19,928 ಸಾಲ‌ ನೀಡಲಾಗಿದೆ’ ಎಂದರು.

‘ಬಳ್ಳಾರಿ, ಕಲಬುರ್ಗಿ ಮತ್ತು‌ ಚಿತ್ರದುರ್ಗ ಜಿಲ್ಲೆಯಲ್ಲಿ ಬ್ಯಾಂಕ್ ಸಂಚಾರಿ ಎಟಿಎಂ ಸೌಲಭ್ಯ ಒದಗಿಸಲಾಗಿದೆ. ಬ್ಯಾಂಕಿನ ವ್ಯವಹಾರ ಪ್ರತಿನಿಧಿಗಳು ಕೋವಿಡ್ ಸಂದರ್ಭದಲ್ಲೂ ಮಾರ್ಚ್‌ನಿಂದ ಮೇವರೆಗೆ ಒಟ್ಟು 26 ಲಕ್ಷ ಸಂಪರ್ಕ ಸಾಧಿಸಿ ಆ ಮೂಲಕ ₹762 ಕೋಟಿ ಮೊತ್ತದ ವಹಿವಾಟು ನಡೆಸಿದ್ದಾರೆ’ ಎಂದು ಮಾಹಿತಿ ‌ನೀಡಿದರು.

ಸಾಲ ಯೋಜನೆ: ‘ಸಾಲಮನ್ನಾ ಯೋಜನೆ ಅಡಿ ಮನ್ನಾ ಆಗಿ ಬಾಕಿ ಉಳಿದ ರೈತರ ₹50 ಸಾವಿರದೊಳಗಿನ ಸಾಲವನ್ನು ಪ್ರತ್ಯೇಕಗೊಳಿಸಿ, 36 ತಿಂಗಳ ಕಂತಿನ ಹೊಸ ಸಾಲವನ್ನು ರೈತರಿಗೆ ನೀಡುವ ಯೋಜನೆ ರೂಪಿಸಲಾಗುತ್ತಿದೆ. ಈಗಾಗಲೆ ಸಾಲ ಪಡೆದು ಕೋವಿಡ್‌ ಕಾರಣಕ್ಕೆ ಬಾಕಿ ಉಳಿಸಿಕೊಂಡವರಿಗೂ, ₹1 ಲಕ್ಷದವರೆಗೆ ಸಾಲ ನೀಡುವ ಯೋಜನೆ ಜಾರಿಗೊಳಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT