<p><strong>ಬೆಂಗಳೂರು:</strong> ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮೆ ಸಂಸ್ಥೆಯು (ಎಲ್ಐಸಿ) ಹೊಸ ಟರ್ಮ್ ಇನ್ಶುರೆನ್ಸ್ ಪಾಲಿಸಿ, ‘ಜೀವನ್ ಅಮರ್’ ಪರಿಚಯಿಸಿದೆ.</p>.<p>18 ರಿಂದ 65 ವಯಸ್ಸಿನವರು ಈ ಯೋಜನೆ ಖರೀದಿಸಬಹುದು. ಪಾಲಿಸಿ ಅವಧಿಯು 10 ವರ್ಷದಿಂದ ಗರಿಷ್ಠ 40 ವರ್ಷದವರೆಗೆ ಇರಲಿದೆ. ಕನಿಷ್ಠ ಪರಿಹಾರ ಮೊತ್ತವು ₹ 25 ಲಕ್ಷ ಇರಲಿದೆ. ಮರಣ ಪರಿಹಾರ ಪಾವತಿಯು ಒಂದೇ ಗಂಟಿನಲ್ಲಿ ಅಥವಾ ಕಂತಿನಲ್ಲಿ ಪಡೆಯುವ ಅವಕಾಶ ಇದರಲ್ಲಿ ಇದೆ. ಈ ಯೋಜನೆಯಡಿ ಅಪಘಾತ ವಿಮೆ ಪರಿಹಾರವನ್ನೂ ಹೆಚ್ಚುವರಿಯಾಗಿ ಸೇರ್ಪಡೆ ಮಾಡಬಹುದು. ತಂಬಾಕು ಸೇವನೆ ಮಾಡುವವರು ಮತ್ತು ಮಾಡದವರಿಗೆ ಪ್ರತ್ಯೇಕ ವಿಮೆ ಕಂತು ನಿಗದಿಪಡಿಸಲಾಗಿದೆ. ಮಹಿಳೆಯರಿಗೆ ಕಡಿಮೆ ಕಂತು ಪಾವತಿ ಸೌಲಭ್ಯ ಇದೆ. ಈ ಯೋಜನೆಯಲ್ಲಿನ ಹೂಡಿಕೆಗೆ ತೆರಿಗೆ ವಿನಾಯ್ತಿಯೂ ಲಭ್ಯ ಇದೆ.</p>.<p class="Briefhead"><strong>ಅಧಿಕಾರ ಸ್ವೀಕಾರ</strong></p>.<p>ಕರ್ನಾಟಕ ಆ್ಯಂಟಿಬಯೊಟಿಕ್ಸ್ ಆ್ಯಂಡ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ನ (ಕೆಎಪಿಎಲ್) ಹೊಸ ವ್ಯವಸ್ಥಾಪಕ ನಿರ್ದೇಶಕರಾಗಿ ಸುನಿಲ್ ಕುಮಾರ್ ಕೆ. ಅಧಿಕಾರ ಸ್ವೀಕರಿಸಿದ್ದಾರೆ.</p>.<p>1996ರಲ್ಲಿ ‘ಕೆಎಪಿಎಲ್’ ಸೇರಿದ್ದ ಇವರು ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಈ ಬಡ್ತಿಗೆ ಮುನ್ನ ಇವರು ಮಾರುಕಟ್ಟೆ ವಿಭಾಗದ ಜನರಲ್ ಮ್ಯಾನೇಜರ್ ಆಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮೆ ಸಂಸ್ಥೆಯು (ಎಲ್ಐಸಿ) ಹೊಸ ಟರ್ಮ್ ಇನ್ಶುರೆನ್ಸ್ ಪಾಲಿಸಿ, ‘ಜೀವನ್ ಅಮರ್’ ಪರಿಚಯಿಸಿದೆ.</p>.<p>18 ರಿಂದ 65 ವಯಸ್ಸಿನವರು ಈ ಯೋಜನೆ ಖರೀದಿಸಬಹುದು. ಪಾಲಿಸಿ ಅವಧಿಯು 10 ವರ್ಷದಿಂದ ಗರಿಷ್ಠ 40 ವರ್ಷದವರೆಗೆ ಇರಲಿದೆ. ಕನಿಷ್ಠ ಪರಿಹಾರ ಮೊತ್ತವು ₹ 25 ಲಕ್ಷ ಇರಲಿದೆ. ಮರಣ ಪರಿಹಾರ ಪಾವತಿಯು ಒಂದೇ ಗಂಟಿನಲ್ಲಿ ಅಥವಾ ಕಂತಿನಲ್ಲಿ ಪಡೆಯುವ ಅವಕಾಶ ಇದರಲ್ಲಿ ಇದೆ. ಈ ಯೋಜನೆಯಡಿ ಅಪಘಾತ ವಿಮೆ ಪರಿಹಾರವನ್ನೂ ಹೆಚ್ಚುವರಿಯಾಗಿ ಸೇರ್ಪಡೆ ಮಾಡಬಹುದು. ತಂಬಾಕು ಸೇವನೆ ಮಾಡುವವರು ಮತ್ತು ಮಾಡದವರಿಗೆ ಪ್ರತ್ಯೇಕ ವಿಮೆ ಕಂತು ನಿಗದಿಪಡಿಸಲಾಗಿದೆ. ಮಹಿಳೆಯರಿಗೆ ಕಡಿಮೆ ಕಂತು ಪಾವತಿ ಸೌಲಭ್ಯ ಇದೆ. ಈ ಯೋಜನೆಯಲ್ಲಿನ ಹೂಡಿಕೆಗೆ ತೆರಿಗೆ ವಿನಾಯ್ತಿಯೂ ಲಭ್ಯ ಇದೆ.</p>.<p class="Briefhead"><strong>ಅಧಿಕಾರ ಸ್ವೀಕಾರ</strong></p>.<p>ಕರ್ನಾಟಕ ಆ್ಯಂಟಿಬಯೊಟಿಕ್ಸ್ ಆ್ಯಂಡ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ನ (ಕೆಎಪಿಎಲ್) ಹೊಸ ವ್ಯವಸ್ಥಾಪಕ ನಿರ್ದೇಶಕರಾಗಿ ಸುನಿಲ್ ಕುಮಾರ್ ಕೆ. ಅಧಿಕಾರ ಸ್ವೀಕರಿಸಿದ್ದಾರೆ.</p>.<p>1996ರಲ್ಲಿ ‘ಕೆಎಪಿಎಲ್’ ಸೇರಿದ್ದ ಇವರು ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಈ ಬಡ್ತಿಗೆ ಮುನ್ನ ಇವರು ಮಾರುಕಟ್ಟೆ ವಿಭಾಗದ ಜನರಲ್ ಮ್ಯಾನೇಜರ್ ಆಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>