<p><strong>ವಾಷಿಂಗ್ಟನ್</strong>: ‘ಪಂಜಾಬ್ ಆ್ಯಂಡ್ ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ನಲ್ಲಿ (ಪಿಎಂಸಿ) ನಡೆದಿರುವ ಹಗರಣದ ಕಾರಣಕ್ಕೆ ದಿವಾಳಿ ಸಂಹಿತೆಯಲ್ಲಿಯೇ (ಐಬಿಸಿ) ದೋಷಗಳಿವೆ ಎನ್ನುವ ತೀರ್ಮಾನಕ್ಕೆ ಬರುವುದು ಸರಿಯಲ್ಲ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.</p>.<p>‘ಒಂದು ಪ್ರಕರಣವನ್ನೇ ಉತ್ಪ್ರೇಕ್ಷಿಸಿ ‘ಐಬಿಸಿ’ಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವ ನಿರ್ಧಾರಕ್ಕೆ ಬರಬಾರದು. ಒಂದು ಪ್ರಕರಣದಲ್ಲಿನ ಅನಿಶ್ಚಿತತೆಯನ್ನೇ ಸಾರ್ವತ್ರಿಕಗೊಳಿಸಬಾರದು’ ಎಂದು ಹೇಳಿದ್ದಾರೆ. ‘ಪಿಎಂಸಿ’ ಹಗರಣವು ‘ಐಬಿಸಿ’ಯಲ್ಲಿನ ಲೋಪದೋಷಗಳಿಗೆ ಕನ್ನಡಿ ಹಿಡಿಯುತ್ತಿದೆಯೇ ಎನ್ನುವ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.</p>.<p>‘ಒಂದು ವೇಳೆ ಜಾರಿ ನಿರ್ದೇಶನಾಲಯವು ಕೆಲವರ ಆಸ್ತಿ ವಶಪಡಿಸಿಕೊಂಡ ಸಂದರ್ಭದಲ್ಲಿ ದಿವಾಳಿ ಸಂಹಿತೆ ಪ್ರಕ್ರಿಯೆಯಲ್ಲಿ ಅನಿಶ್ಚಿತತೆ ಉದ್ಭವಿಸಿದರೆ ಅದಕ್ಕೆ ‘ಐಬಿಸಿ’ ಕಾರಣ ಎನ್ನುವ ನಿರ್ಣಯಕ್ಕೆ ಬರುವುದು ಸರಿಯಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.</p>.<p class="Subhead">ಜಾಗತಿಕ ಸಹಕಾರದ ಬಲವರ್ಧನೆ: ಜಾಗತಿಕ ಆರ್ಥಿಕತೆಯಲ್ಲಿನ ಅಸಮತೋಲನದ ಹಿನ್ನೆಲೆಯಲ್ಲಿ ಬಹುಬಗೆಯ ಹಂತದಲ್ಲಿ ಅಂತರರಾಷ್ಟ್ರೀಯ ಸಹಕಾರ ಬಲಪಡಿಸುವ ಅಗತ್ಯ ಇದೆ ಎಂದೂ ನಿರ್ಮಲಾ ಪ್ರತಿಪಾದಿಸಿದ್ದಾರೆ.</p>.<p>ವಾಷಿಂಗ್ಟನ್ನಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಹಣಕಾಸು ಸಮಿತಿಯ ಪೂರ್ಣಾಧಿವೇಶನದಲ್ಲಿ ಅವರು ಮಾತನಾಡುತ್ತಿದ್ದರು.</p>.<p>‘ವಿತ್ತೀಯ, ಹಣಕಾಸು ಮತ್ತು ಅರ್ಥ ವ್ಯವಸ್ಥೆಯ ವಿವಿಧ ಹಂತಗಳ ಸುಧಾರಣೆ ಒಳಗೊಂಡ ಕ್ರಮಗಳಿಂದಲೇ ಪ್ರತಿಯೊಂದು ದೇಶವು ತನ್ನ ಆರ್ಥಿಕ ಬೆಳವಣಿಗೆ ಸಾಧಿಸಲಿದೆ.</p>.<p>‘ವಿವಿಧ ದೇಶಗಳು ಸದ್ಯಕ್ಕೆ ಎದುರಿಸುತ್ತಿರುವ ನಿರಂತರವಾದ ಆರ್ಥಿಕ ಬೆಳವಣಿಗೆ ದರ ಕುಸಿತದ ಸಮಸ್ಯೆಗೆ ‘ಐಎಂಎಫ್’ ಸೂಕ್ತ ಪರಿಹಾರ ಒದಗಿಸಬೇಕು. ಬಂಡವಾಳ ಒಳ ಹರಿವಿನ ಕುಸಿತವೂ ಸೇರಿದಂತೆ ವಿವಿಧ ವಿದ್ಯಮಾನಗಳು ಆರ್ಥಿಕತೆಯನ್ನು ಬಾಧಿಸುವುದನ್ನು ತಡೆಗಟ್ಟುವ ಅಗತ್ಯ ಹೆಚ್ಚಿದೆ’ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಾಷಿಂಗ್ಟನ್</strong>: ‘ಪಂಜಾಬ್ ಆ್ಯಂಡ್ ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ನಲ್ಲಿ (ಪಿಎಂಸಿ) ನಡೆದಿರುವ ಹಗರಣದ ಕಾರಣಕ್ಕೆ ದಿವಾಳಿ ಸಂಹಿತೆಯಲ್ಲಿಯೇ (ಐಬಿಸಿ) ದೋಷಗಳಿವೆ ಎನ್ನುವ ತೀರ್ಮಾನಕ್ಕೆ ಬರುವುದು ಸರಿಯಲ್ಲ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.</p>.<p>‘ಒಂದು ಪ್ರಕರಣವನ್ನೇ ಉತ್ಪ್ರೇಕ್ಷಿಸಿ ‘ಐಬಿಸಿ’ಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವ ನಿರ್ಧಾರಕ್ಕೆ ಬರಬಾರದು. ಒಂದು ಪ್ರಕರಣದಲ್ಲಿನ ಅನಿಶ್ಚಿತತೆಯನ್ನೇ ಸಾರ್ವತ್ರಿಕಗೊಳಿಸಬಾರದು’ ಎಂದು ಹೇಳಿದ್ದಾರೆ. ‘ಪಿಎಂಸಿ’ ಹಗರಣವು ‘ಐಬಿಸಿ’ಯಲ್ಲಿನ ಲೋಪದೋಷಗಳಿಗೆ ಕನ್ನಡಿ ಹಿಡಿಯುತ್ತಿದೆಯೇ ಎನ್ನುವ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.</p>.<p>‘ಒಂದು ವೇಳೆ ಜಾರಿ ನಿರ್ದೇಶನಾಲಯವು ಕೆಲವರ ಆಸ್ತಿ ವಶಪಡಿಸಿಕೊಂಡ ಸಂದರ್ಭದಲ್ಲಿ ದಿವಾಳಿ ಸಂಹಿತೆ ಪ್ರಕ್ರಿಯೆಯಲ್ಲಿ ಅನಿಶ್ಚಿತತೆ ಉದ್ಭವಿಸಿದರೆ ಅದಕ್ಕೆ ‘ಐಬಿಸಿ’ ಕಾರಣ ಎನ್ನುವ ನಿರ್ಣಯಕ್ಕೆ ಬರುವುದು ಸರಿಯಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.</p>.<p class="Subhead">ಜಾಗತಿಕ ಸಹಕಾರದ ಬಲವರ್ಧನೆ: ಜಾಗತಿಕ ಆರ್ಥಿಕತೆಯಲ್ಲಿನ ಅಸಮತೋಲನದ ಹಿನ್ನೆಲೆಯಲ್ಲಿ ಬಹುಬಗೆಯ ಹಂತದಲ್ಲಿ ಅಂತರರಾಷ್ಟ್ರೀಯ ಸಹಕಾರ ಬಲಪಡಿಸುವ ಅಗತ್ಯ ಇದೆ ಎಂದೂ ನಿರ್ಮಲಾ ಪ್ರತಿಪಾದಿಸಿದ್ದಾರೆ.</p>.<p>ವಾಷಿಂಗ್ಟನ್ನಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಹಣಕಾಸು ಸಮಿತಿಯ ಪೂರ್ಣಾಧಿವೇಶನದಲ್ಲಿ ಅವರು ಮಾತನಾಡುತ್ತಿದ್ದರು.</p>.<p>‘ವಿತ್ತೀಯ, ಹಣಕಾಸು ಮತ್ತು ಅರ್ಥ ವ್ಯವಸ್ಥೆಯ ವಿವಿಧ ಹಂತಗಳ ಸುಧಾರಣೆ ಒಳಗೊಂಡ ಕ್ರಮಗಳಿಂದಲೇ ಪ್ರತಿಯೊಂದು ದೇಶವು ತನ್ನ ಆರ್ಥಿಕ ಬೆಳವಣಿಗೆ ಸಾಧಿಸಲಿದೆ.</p>.<p>‘ವಿವಿಧ ದೇಶಗಳು ಸದ್ಯಕ್ಕೆ ಎದುರಿಸುತ್ತಿರುವ ನಿರಂತರವಾದ ಆರ್ಥಿಕ ಬೆಳವಣಿಗೆ ದರ ಕುಸಿತದ ಸಮಸ್ಯೆಗೆ ‘ಐಎಂಎಫ್’ ಸೂಕ್ತ ಪರಿಹಾರ ಒದಗಿಸಬೇಕು. ಬಂಡವಾಳ ಒಳ ಹರಿವಿನ ಕುಸಿತವೂ ಸೇರಿದಂತೆ ವಿವಿಧ ವಿದ್ಯಮಾನಗಳು ಆರ್ಥಿಕತೆಯನ್ನು ಬಾಧಿಸುವುದನ್ನು ತಡೆಗಟ್ಟುವ ಅಗತ್ಯ ಹೆಚ್ಚಿದೆ’ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>