<p><strong>ನವದೆಹಲಿ:</strong> ಮುತ್ತೂಟ್ ಫೈನಾನ್ಸ್ನ ಅಧ್ಯಕ್ಷ ಎಂ.ಜಿ.ಜಾರ್ಜ್ ಮುತ್ತೂಟ್ (71) ಅವರು ಶುಕ್ರವಾರ ಸಂಜೆ ನಿಧನರಾಗಿದ್ದಾರೆ ಎಂದು ಕಂಪನಿಯು ಶನಿವಾರ ಷೇರುಪೇಟೆಗೆ ಮಾಹಿತಿ ನೀಡಿದೆ. ಆದರೆ ಅವರ ನಿಧನದ ಕಾರಣವನ್ನು ಕಂಪನಿ ತಿಳಿಸಿಲ್ಲ.</p>.<p>ಹೃದಯಾಘಾತದಿಂದ ಅವರು ನಿಧನರಾಗಿದ್ದಾರೆ ಎಂದು ಕಂಪನಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದರೆ ಕುಟುಂಬದ ಮೂಲಗಳು ‘ಅವರು ಮನೆಯಲ್ಲಿ ಕುಸಿದು ಬಿದ್ದರು. ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ’ ಎಂದು ತಿಳಿಸಿವೆ. ಜಾರ್ಜ್ ಅವರಿಗೆ ಪತ್ನಿ ಸಾರಾ ಜಾರ್ಜ್ ಮತ್ತು ಇಬ್ಬರು ಮಕ್ಕಳಿದ್ದಾರೆ.</p>.<p>ಮುತ್ತೂಟ್ ಫೈನಾನ್ಸ್ ಕಂಪನಿಯನ್ನು ಹೊಸ ಎತ್ತರಕ್ಕೆ ಒಯ್ಯುವಲ್ಲಿ ಹಾಗು ದೇಶದಾದ್ಯಂತ ಮತ್ತು ಮುಖ್ಯವಾಗಿ ಮಧ್ಯಪ್ರಾಚ್ಯದಲ್ಲಿ ವಹಿವಾಟು ವಿಸ್ತರಿಸುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದಾರೆ. ಚಿನ್ನದ ಸಾಲವನ್ನು ಸಂಘಟಿತ ವ್ಯವಹಾರವನ್ನಾಗಿ ಮಾಡುವಲ್ಲಿ ಅವರ ಪಾತ್ರ ಪ್ರಮುಖವಾದದ್ದು.</p>.<p>ಕೊಚ್ಚಿಯಲ್ಲಿ ಮುಖ್ಯ ಕಚೇರಿ ಹೊಂದಿದ್ದು, ಇದು ಕೇರಳದ ಅತಿದೊಡ್ಡ ವ್ಯಾಪಾರ ಸಂಸ್ಥೆಗಳಲ್ಲಿ ಒಂದಾಗಿದೆ.</p>.<p>ಅವರು 1949ರ ನವೆಂಬರ್ನಲ್ಲಿಕೇರಳದ ಕೋಯೆನ್ಚೇರಿಯಲ್ಲಿ (ಇಂದಿನ ಪಟ್ಟನಂತಿಟ್ಟ) ಜನಿಸಿದರು. ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದ ನಂತರ,ಕಚೇರಿ ಸಹಾಯಕರಾಗಿ ಮುತ್ತೂಟ್ ಕುಟುಂಬದ ವ್ಯವಹಾರವನ್ನು ಸೇರಿಕೊಂಡರು. 1979ರಲ್ಲಿವ್ಯವಸ್ಥಾಪಕ ನಿರ್ದೇಶಕರಾದರು. 1993ರ ಫೆಬ್ರುವರಿಯಲ್ಲಿ ಸಮೂಹದ ಅಧ್ಯಕ್ಷರಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಮುತ್ತೂಟ್ ಫೈನಾನ್ಸ್ನ ಅಧ್ಯಕ್ಷ ಎಂ.ಜಿ.ಜಾರ್ಜ್ ಮುತ್ತೂಟ್ (71) ಅವರು ಶುಕ್ರವಾರ ಸಂಜೆ ನಿಧನರಾಗಿದ್ದಾರೆ ಎಂದು ಕಂಪನಿಯು ಶನಿವಾರ ಷೇರುಪೇಟೆಗೆ ಮಾಹಿತಿ ನೀಡಿದೆ. ಆದರೆ ಅವರ ನಿಧನದ ಕಾರಣವನ್ನು ಕಂಪನಿ ತಿಳಿಸಿಲ್ಲ.</p>.<p>ಹೃದಯಾಘಾತದಿಂದ ಅವರು ನಿಧನರಾಗಿದ್ದಾರೆ ಎಂದು ಕಂಪನಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದರೆ ಕುಟುಂಬದ ಮೂಲಗಳು ‘ಅವರು ಮನೆಯಲ್ಲಿ ಕುಸಿದು ಬಿದ್ದರು. ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ’ ಎಂದು ತಿಳಿಸಿವೆ. ಜಾರ್ಜ್ ಅವರಿಗೆ ಪತ್ನಿ ಸಾರಾ ಜಾರ್ಜ್ ಮತ್ತು ಇಬ್ಬರು ಮಕ್ಕಳಿದ್ದಾರೆ.</p>.<p>ಮುತ್ತೂಟ್ ಫೈನಾನ್ಸ್ ಕಂಪನಿಯನ್ನು ಹೊಸ ಎತ್ತರಕ್ಕೆ ಒಯ್ಯುವಲ್ಲಿ ಹಾಗು ದೇಶದಾದ್ಯಂತ ಮತ್ತು ಮುಖ್ಯವಾಗಿ ಮಧ್ಯಪ್ರಾಚ್ಯದಲ್ಲಿ ವಹಿವಾಟು ವಿಸ್ತರಿಸುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದಾರೆ. ಚಿನ್ನದ ಸಾಲವನ್ನು ಸಂಘಟಿತ ವ್ಯವಹಾರವನ್ನಾಗಿ ಮಾಡುವಲ್ಲಿ ಅವರ ಪಾತ್ರ ಪ್ರಮುಖವಾದದ್ದು.</p>.<p>ಕೊಚ್ಚಿಯಲ್ಲಿ ಮುಖ್ಯ ಕಚೇರಿ ಹೊಂದಿದ್ದು, ಇದು ಕೇರಳದ ಅತಿದೊಡ್ಡ ವ್ಯಾಪಾರ ಸಂಸ್ಥೆಗಳಲ್ಲಿ ಒಂದಾಗಿದೆ.</p>.<p>ಅವರು 1949ರ ನವೆಂಬರ್ನಲ್ಲಿಕೇರಳದ ಕೋಯೆನ್ಚೇರಿಯಲ್ಲಿ (ಇಂದಿನ ಪಟ್ಟನಂತಿಟ್ಟ) ಜನಿಸಿದರು. ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದ ನಂತರ,ಕಚೇರಿ ಸಹಾಯಕರಾಗಿ ಮುತ್ತೂಟ್ ಕುಟುಂಬದ ವ್ಯವಹಾರವನ್ನು ಸೇರಿಕೊಂಡರು. 1979ರಲ್ಲಿವ್ಯವಸ್ಥಾಪಕ ನಿರ್ದೇಶಕರಾದರು. 1993ರ ಫೆಬ್ರುವರಿಯಲ್ಲಿ ಸಮೂಹದ ಅಧ್ಯಕ್ಷರಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>