<p><strong>ಬಾಗಲಕೋಟೆ</strong>: ಜಿಲ್ಲೆಯಲ್ಲಿ ನೀರಿನ ಅಭಾವ, ಹವಾಮಾನದ ಏರುಪೇರಿನಿಂದ ದ್ರಾಕ್ಷಿ ಇಳುವರಿಯಲ್ಲಿ ಕುಸಿತವಾಗಿದೆ. ಇದರ ಪರಿಣಾಮ ಒಣದ್ರಾಕ್ಷಿಗೆ ದಾಖಲೆ ಬೆಲೆ ದೊರೆಯುತ್ತಿದೆ. ಆದರೆ, ರೈತರ ಬಳಿ ಒಣದ್ರಾಕ್ಷಿಯಿಲ್ಲ.</p><p>ಜಿಲ್ಲೆಯ 3,809 ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತದೆ. ಅದರಲ್ಲಿ ಶೇ 80ರಷ್ಟು ಒಣದ್ರಾಕ್ಷಿ ಮಾಡಲಾಗುತ್ತದೆ. ಶೇ 70ರಷ್ಟು ರೈತರ ಬೆಳೆ ಹಾಳಾಗಿದೆ. ಉಳಿದ ರೈತರ ಬೆಳೆಗಳಲ್ಲೂ ಶೇ 50ರಷ್ಟು ಮಾತ್ರ ಫಸಲು ಬಂದಿದೆ. ಮಾರುಕಟ್ಟೆಯಲ್ಲಿ ದ್ರಾಕ್ಷಿಗೆ ಸರಾಸರಿ (ಮೂರು ಗ್ರೇಡ್ ಮಾಡಲಾಗುತ್ತದೆ) ₹180 ರಿಂದ ₹300ರ ವರೆಗೆ ಬೆಲೆ ದೊರೆಯುತ್ತಿದೆ. ಗ್ರೇಡ್ ಒನ್ ಪ್ರತಿ ಕೆ.ಜಿ ದ್ರಾಕ್ಷಿಗೆ ಈ ಬಾರಿ ₹500ರ ವರೆಗೂ ಬೆಲೆ ದೊರೆತಿದೆ.</p><p>ಕೋವಿಡ್ಗಿಂತ ಮುಂಚೆ ರೈತರಿಗೆ ಪ್ರತಿ ಕೆ.ಜಿಗೆ ₹150ರಿಂದ ₹190ರ ವರೆಗೆ ಬೆಲೆ ದೊರೆಯುತ್ತಿತ್ತು. ಕೋವಿಡ್ ನಂತರದಲ್ಲಿ ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದ ಏರುಪೇರಾಯಿತು. ಕೆ.ಜಿ ದ್ರಾಕ್ಷಿ ಬೆಲೆ ₹100 ರಿಂದ ₹120ಕ್ಕೆ ಕುಸಿಯಿತು. ಸತತ ಬೆಲೆ ಇಳಿಕೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದರು. ಶೇ 10ರಷ್ಟು ರೈತರು ದ್ರಾಕ್ಷಿ ಬೆಳೆಯುವುದರಿಂದ ದೂರ ಸರಿದಿದ್ದಾರೆ.</p><p><strong>ಸೌಲಭ್ಯದ ಕೊರತೆ:</strong> </p><p>ರೈತರು ಆರ್ಥಿಕವಾಗಿ ಸಬಲರಲ್ಲದ ಕಾರಣ ಬೆಲೆ ಕುಸಿತವಾಗಿದ್ದರೂ ಮಾರುತ್ತಾರೆ. ಅನುಕೂಲವಿದ್ದರೂ ಸಂರಕ್ಷಿಸಿಡಬೇಕು ಎಂದರೆ ಶೈತ್ಯಾಗಾರಗಳಿಲ್ಲ. ಶೈತ್ಯಾಗಾರದಲ್ಲಿ ಇಡಲು ಮಹಾರಾಷ್ಟ್ರದ ಪಂಢರಪುರ, ತಾಸಗಾಂವ್ಗೆ ಒಯ್ಯಬೇಕು.</p><p>‘ಒಂದು ಟನ್ ದ್ರಾಕ್ಷಿಗೆ ₹600 ಕೊಡಬೇಕು. ಸಾಗಣೆ ವೆಚ್ಚ, ಲೋಡಿಂಗ್ ಮತ್ತು ಅನ್ಲೋಡಿಂಗ್ ಖರ್ಚು ಸೇರಿ ಉತ್ಪಾದನೆ ವೆಚ್ಚ ಹೆಚ್ಚಾಗುತ್ತದೆ. ಇಲ್ಲಿಯೇ ಶೈತ್ಯಾಗಾರ ಸ್ಥಾಪಿಸಲು ಸರ್ಕಾರ ಮುಂದಾಗಬೇಕು’ ಎಂದು ಕಾಜಿಬೀಳಗಿಯ ರೈತ ಚನ್ನಪ್ಪ ಚನ್ನವೀರ ಒತ್ತಾಯಿಸಿದರು.</p><p>‘ಜಿಲ್ಲೆಯಲ್ಲಿ ಮಾರುಕಟ್ಟೆ ವ್ಯವಸ್ಥೆ ಕೂಡ ಇಲ್ಲ. ಮಹಾರಾಷ್ಟ್ರದ ತಾಸಗಾಂವ್ಗೆ ಒಯ್ದು ಮಾರಬೇಕು. ಇಲ್ಲಿಯೇ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕಿದೆ’ ಎಂಬುದು ಅವರ ಆಗ್ರಹ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ</strong>: ಜಿಲ್ಲೆಯಲ್ಲಿ ನೀರಿನ ಅಭಾವ, ಹವಾಮಾನದ ಏರುಪೇರಿನಿಂದ ದ್ರಾಕ್ಷಿ ಇಳುವರಿಯಲ್ಲಿ ಕುಸಿತವಾಗಿದೆ. ಇದರ ಪರಿಣಾಮ ಒಣದ್ರಾಕ್ಷಿಗೆ ದಾಖಲೆ ಬೆಲೆ ದೊರೆಯುತ್ತಿದೆ. ಆದರೆ, ರೈತರ ಬಳಿ ಒಣದ್ರಾಕ್ಷಿಯಿಲ್ಲ.</p><p>ಜಿಲ್ಲೆಯ 3,809 ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತದೆ. ಅದರಲ್ಲಿ ಶೇ 80ರಷ್ಟು ಒಣದ್ರಾಕ್ಷಿ ಮಾಡಲಾಗುತ್ತದೆ. ಶೇ 70ರಷ್ಟು ರೈತರ ಬೆಳೆ ಹಾಳಾಗಿದೆ. ಉಳಿದ ರೈತರ ಬೆಳೆಗಳಲ್ಲೂ ಶೇ 50ರಷ್ಟು ಮಾತ್ರ ಫಸಲು ಬಂದಿದೆ. ಮಾರುಕಟ್ಟೆಯಲ್ಲಿ ದ್ರಾಕ್ಷಿಗೆ ಸರಾಸರಿ (ಮೂರು ಗ್ರೇಡ್ ಮಾಡಲಾಗುತ್ತದೆ) ₹180 ರಿಂದ ₹300ರ ವರೆಗೆ ಬೆಲೆ ದೊರೆಯುತ್ತಿದೆ. ಗ್ರೇಡ್ ಒನ್ ಪ್ರತಿ ಕೆ.ಜಿ ದ್ರಾಕ್ಷಿಗೆ ಈ ಬಾರಿ ₹500ರ ವರೆಗೂ ಬೆಲೆ ದೊರೆತಿದೆ.</p><p>ಕೋವಿಡ್ಗಿಂತ ಮುಂಚೆ ರೈತರಿಗೆ ಪ್ರತಿ ಕೆ.ಜಿಗೆ ₹150ರಿಂದ ₹190ರ ವರೆಗೆ ಬೆಲೆ ದೊರೆಯುತ್ತಿತ್ತು. ಕೋವಿಡ್ ನಂತರದಲ್ಲಿ ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದ ಏರುಪೇರಾಯಿತು. ಕೆ.ಜಿ ದ್ರಾಕ್ಷಿ ಬೆಲೆ ₹100 ರಿಂದ ₹120ಕ್ಕೆ ಕುಸಿಯಿತು. ಸತತ ಬೆಲೆ ಇಳಿಕೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದರು. ಶೇ 10ರಷ್ಟು ರೈತರು ದ್ರಾಕ್ಷಿ ಬೆಳೆಯುವುದರಿಂದ ದೂರ ಸರಿದಿದ್ದಾರೆ.</p><p><strong>ಸೌಲಭ್ಯದ ಕೊರತೆ:</strong> </p><p>ರೈತರು ಆರ್ಥಿಕವಾಗಿ ಸಬಲರಲ್ಲದ ಕಾರಣ ಬೆಲೆ ಕುಸಿತವಾಗಿದ್ದರೂ ಮಾರುತ್ತಾರೆ. ಅನುಕೂಲವಿದ್ದರೂ ಸಂರಕ್ಷಿಸಿಡಬೇಕು ಎಂದರೆ ಶೈತ್ಯಾಗಾರಗಳಿಲ್ಲ. ಶೈತ್ಯಾಗಾರದಲ್ಲಿ ಇಡಲು ಮಹಾರಾಷ್ಟ್ರದ ಪಂಢರಪುರ, ತಾಸಗಾಂವ್ಗೆ ಒಯ್ಯಬೇಕು.</p><p>‘ಒಂದು ಟನ್ ದ್ರಾಕ್ಷಿಗೆ ₹600 ಕೊಡಬೇಕು. ಸಾಗಣೆ ವೆಚ್ಚ, ಲೋಡಿಂಗ್ ಮತ್ತು ಅನ್ಲೋಡಿಂಗ್ ಖರ್ಚು ಸೇರಿ ಉತ್ಪಾದನೆ ವೆಚ್ಚ ಹೆಚ್ಚಾಗುತ್ತದೆ. ಇಲ್ಲಿಯೇ ಶೈತ್ಯಾಗಾರ ಸ್ಥಾಪಿಸಲು ಸರ್ಕಾರ ಮುಂದಾಗಬೇಕು’ ಎಂದು ಕಾಜಿಬೀಳಗಿಯ ರೈತ ಚನ್ನಪ್ಪ ಚನ್ನವೀರ ಒತ್ತಾಯಿಸಿದರು.</p><p>‘ಜಿಲ್ಲೆಯಲ್ಲಿ ಮಾರುಕಟ್ಟೆ ವ್ಯವಸ್ಥೆ ಕೂಡ ಇಲ್ಲ. ಮಹಾರಾಷ್ಟ್ರದ ತಾಸಗಾಂವ್ಗೆ ಒಯ್ದು ಮಾರಬೇಕು. ಇಲ್ಲಿಯೇ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕಿದೆ’ ಎಂಬುದು ಅವರ ಆಗ್ರಹ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>