ನವದೆಹಲಿ: ಲಕ್ಷಾಂತರ ಜನರಿಗೆ ಕನಿಷ್ಠ ಘನತೆಯ ಜೀವನವನ್ನೂ ನಿರಾಕರಿಸುವ ಅಸಮಾನತೆಗಳನ್ನು, ಅನ್ಯಾಯಗಳನ್ನು ಕೋವಿಡ್–19 ಸಾಂಕ್ರಾಮಿಕವು ಭೂತಗನ್ನಡಿ ಹಾಕಿ ತೋರಿಸಿಕೊಟ್ಟಿದೆ ಎಂದು ವಿಪ್ರೊ ಸಂಸ್ಥಾಪಕ ಅಜೀಂ ಪ್ರೇಮ್ಜಿ ಸೋಮವಾರ ಹೇಳಿದ್ದಾರೆ. ಸರ್ಕಾರಿ ವ್ಯವಸ್ಥೆಯ ಮೂಲಭೂತ ಪಾತ್ರ ಏನು ಎಂಬುದನ್ನೂ ಇದು ಸ್ಪಷ್ಟಪಡಿಸಿದೆ ಎಂದೂ ಅವರು ಹೇಳಿದ್ದಾರೆ.