<p><strong>ನವದೆಹಲಿ: </strong>ಕಾರ್ವಿ ಸ್ಟಾಕ್ ಬ್ರೋಕಿಂಗ್ ಲಿಮಿಟೆಡ್ನ (ಕೆಎಸ್ಬಿಎಲ್) ಸಿಎಂಡಿ ಸಿ. ಪಾರ್ಥಸಾರಥಿ ಮತ್ತು ಇತರರ ವಿರುದ್ಧದಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ₹ 700 ಕೋಟಿ ಮೌಲ್ಯದ ಷೇರುಗಳನ್ನು ವಹಿವಾಟಿನಿಂದ ಸ್ಥಗಿತಗೊಳಿಸಿರುವುದಾಗಿ ಜಾರಿ ನಿರ್ದೇಶನಾಲಯವು (ಇ.ಡಿ) ಶನಿವಾರ ತಿಳಿಸಿದೆ.</p>.<p>ತೆಲಂಗಾಣ ಪೊಲೀಸರು ಪಾರ್ಥಸಾರತಿ ಅವರನ್ನು ಕಳೆದ ತಿಂಗಳು ಬಂಧಿಸಿದ ಬಳಿಕ ಹೈದರಾಬಾದ್ನ ಚಂಚಲಗುಡ ಜೈಲಿನಲ್ಲಿ ಅವರನ್ನು ಇರಿಸಲಾಗಿದೆ.</p>.<p>ಹೈದರಾಬಾದ್ನ ಆರು ಕಡೆಗಳಲ್ಲಿ ಹಾಗೂ ಕಾರ್ವೆ ಸಮೂಹ ಕಂಪನಿಗಳಿಗೆ ಸೇರಿದ ವಿವಿಧ ಸ್ಥಳಗಳು ಹಾಗೂ ಪಾರ್ಥಸಾರಥಿ ಅವರ ನಿವಾಸದಲ್ಲಿ ‘ಇ.ಡಿ’ ಸೆಪ್ಟೆಂಬರ್ 22ರಂದು ಶೋಧ ಕಾರ್ಯ ನಡೆಸಿತ್ತು.</p>.<p>ಆಸ್ತಿ ದಾಖಲೆಗಳು, ವೈಯಕ್ತಿಕ ದಿನಚರಿಗಳು, ಎಲೆಕ್ಟ್ರಾನಿಕ್ ಸಾಧನಗಳು ಇತ್ಯಾದಿಗಳನ್ನು ಅಪರಾಧದ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಅವುಗಳನ್ನು ವಿಶ್ಲೇಷಿಸಲಾಗುತ್ತಿದೆ ಎಂದು ಅದು ಪ್ರಕಟಣೆಯಲ್ಲಿ ತಿಳಿಸಿದೆ.</p>.<p>ಅಪರಾಧವನ್ನು ಮರೆಮಾಚುವ ಉದ್ದೇಶದಿಂದ ಪಾರ್ಥಸಾರಥಿ ಅವರು ಕಾರ್ವೆ ಸಮೂಹ ಕಂಪನಿಗಳಲ್ಲಿ ಹೊಂದಿರುವ ಷೇರುಗಳನ್ನು ಖಾಸಗಿ ಕಂಪನಿಗಳ ಮೂಲಕ ಮಾರಾಟ ಮಾಡುವ ಪ್ರಯತ್ನ ನಡೆಸಿರುವುದಾಗಿ ವಿಶ್ವಾಸಾರ್ಹ ಮೂಲಗಳಿಂದ ತಿಳಿದುಬಂದಿದೆ. ಹೀಗಾಗಿ 2019–20ನೇ ಸಾಲಿನ ಮೌಲ್ಯಮಾಪನದ ಪ್ರಕಾರ ₹ 700 ಕೋಟಿ ಮೌಲ್ಯದ ಷೇರುಗಳನ್ನು ವಹಿವಾಟಿನಿಂದ ತಡೆಹಿಡಿಯುವಂತೆ ಆದೇಶ ನೀಡಿರುವುದಾಗಿ ‘ಇ.ಡಿ’ ಹೇಳಿದೆ.</p>.<p>ಪಾರ್ಥಸಾರಥಿ ಮತ್ತು ಅವರ ಮಕ್ಕಳಾದ ರಜತ್ ಪಾರ್ಥಸಾರಥಿ ಮತ್ತು ಅಧಿರಾಜ್ ಪಾರ್ಥಸಾರಥಿ ಹಾಗೂ ಅವರ ಕಂಪನಿಗಳು ನೇರ ಮತ್ತು ಪರೋಕ್ಷವಾಗಿಕಾರ್ವೆ ಸಮೂಹದ ಈ ಷೇರುಗಳನ್ನು ಹೊಂದಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಕಾರ್ವಿ ಸ್ಟಾಕ್ ಬ್ರೋಕಿಂಗ್ ಲಿಮಿಟೆಡ್ನ (ಕೆಎಸ್ಬಿಎಲ್) ಸಿಎಂಡಿ ಸಿ. ಪಾರ್ಥಸಾರಥಿ ಮತ್ತು ಇತರರ ವಿರುದ್ಧದಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ₹ 700 ಕೋಟಿ ಮೌಲ್ಯದ ಷೇರುಗಳನ್ನು ವಹಿವಾಟಿನಿಂದ ಸ್ಥಗಿತಗೊಳಿಸಿರುವುದಾಗಿ ಜಾರಿ ನಿರ್ದೇಶನಾಲಯವು (ಇ.ಡಿ) ಶನಿವಾರ ತಿಳಿಸಿದೆ.</p>.<p>ತೆಲಂಗಾಣ ಪೊಲೀಸರು ಪಾರ್ಥಸಾರತಿ ಅವರನ್ನು ಕಳೆದ ತಿಂಗಳು ಬಂಧಿಸಿದ ಬಳಿಕ ಹೈದರಾಬಾದ್ನ ಚಂಚಲಗುಡ ಜೈಲಿನಲ್ಲಿ ಅವರನ್ನು ಇರಿಸಲಾಗಿದೆ.</p>.<p>ಹೈದರಾಬಾದ್ನ ಆರು ಕಡೆಗಳಲ್ಲಿ ಹಾಗೂ ಕಾರ್ವೆ ಸಮೂಹ ಕಂಪನಿಗಳಿಗೆ ಸೇರಿದ ವಿವಿಧ ಸ್ಥಳಗಳು ಹಾಗೂ ಪಾರ್ಥಸಾರಥಿ ಅವರ ನಿವಾಸದಲ್ಲಿ ‘ಇ.ಡಿ’ ಸೆಪ್ಟೆಂಬರ್ 22ರಂದು ಶೋಧ ಕಾರ್ಯ ನಡೆಸಿತ್ತು.</p>.<p>ಆಸ್ತಿ ದಾಖಲೆಗಳು, ವೈಯಕ್ತಿಕ ದಿನಚರಿಗಳು, ಎಲೆಕ್ಟ್ರಾನಿಕ್ ಸಾಧನಗಳು ಇತ್ಯಾದಿಗಳನ್ನು ಅಪರಾಧದ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಅವುಗಳನ್ನು ವಿಶ್ಲೇಷಿಸಲಾಗುತ್ತಿದೆ ಎಂದು ಅದು ಪ್ರಕಟಣೆಯಲ್ಲಿ ತಿಳಿಸಿದೆ.</p>.<p>ಅಪರಾಧವನ್ನು ಮರೆಮಾಚುವ ಉದ್ದೇಶದಿಂದ ಪಾರ್ಥಸಾರಥಿ ಅವರು ಕಾರ್ವೆ ಸಮೂಹ ಕಂಪನಿಗಳಲ್ಲಿ ಹೊಂದಿರುವ ಷೇರುಗಳನ್ನು ಖಾಸಗಿ ಕಂಪನಿಗಳ ಮೂಲಕ ಮಾರಾಟ ಮಾಡುವ ಪ್ರಯತ್ನ ನಡೆಸಿರುವುದಾಗಿ ವಿಶ್ವಾಸಾರ್ಹ ಮೂಲಗಳಿಂದ ತಿಳಿದುಬಂದಿದೆ. ಹೀಗಾಗಿ 2019–20ನೇ ಸಾಲಿನ ಮೌಲ್ಯಮಾಪನದ ಪ್ರಕಾರ ₹ 700 ಕೋಟಿ ಮೌಲ್ಯದ ಷೇರುಗಳನ್ನು ವಹಿವಾಟಿನಿಂದ ತಡೆಹಿಡಿಯುವಂತೆ ಆದೇಶ ನೀಡಿರುವುದಾಗಿ ‘ಇ.ಡಿ’ ಹೇಳಿದೆ.</p>.<p>ಪಾರ್ಥಸಾರಥಿ ಮತ್ತು ಅವರ ಮಕ್ಕಳಾದ ರಜತ್ ಪಾರ್ಥಸಾರಥಿ ಮತ್ತು ಅಧಿರಾಜ್ ಪಾರ್ಥಸಾರಥಿ ಹಾಗೂ ಅವರ ಕಂಪನಿಗಳು ನೇರ ಮತ್ತು ಪರೋಕ್ಷವಾಗಿಕಾರ್ವೆ ಸಮೂಹದ ಈ ಷೇರುಗಳನ್ನು ಹೊಂದಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>